ಗುರುಪುರ ಅಡ್ಡೂರು ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಅಡ್ಡೂರು ಸೇತುವೆ ಅಪಾಯದಲ್ಲಿ

Aug 16, 2024 - 20:32
Aug 16, 2024 - 20:34
 7
ಗುರುಪುರ ಅಡ್ಡೂರು ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ಜಿಲ್ಲಾಧಿಕಾರಿ ಆದೇಶ
ಗುರುಪುರ ಅಡ್ಡೂರು ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ


ಮಂಗಳೂರು: ಮಂಗಳೂರು ತಾಲೂಕಿನ ಸುರತ್ಕಲ್- ಕಬಕ ರಾಜ್ಯ ಹೆದ್ದಾರಿ  101ರಲ್ಲಿ ಬರುವ ಅಡ್ಡೂರು ಸೇತುವೆ ದುಸ್ಥಿತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಪಾಯಕಾರಿ ಯಾಗಿರುವುದರಿಂದ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ  ಹಾಗೂ ಸಂಚಾರ ಮಾರ್ಗ ಬದಲಾವಣೆ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ  ಆದೇಶಿಸಿದ್ದಾರೆ.

ಅಡ್ಡೂರು ಸೇತುವೆಯ ಮೂಲಕ ಸುರತ್ಕಲ್ - ಕಬಕ ರಾಜ್ಯ ಹೆದ್ದಾರಿ  101 ರ ರಸ್ತೆಯಲ್ಲಿ ಬಿಸಿ.ರೋಡ್-ಪೆÇಳಲಿ- ಬೆಂಗಳೂರಿಗೆ ಸಂಚರಿಸುವ ಘನ ವಾಹನಗಳು  ಬದಲಿ ರಸ್ತೆಯನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ.

ಮಂಗಳೂರು- ಗುರುಪುರ ಕೈಕಂಬ ಕಡೆಯಿಂದ ಪೊಳಲಿ ಕಡೆಗೆ ಸಂಚರಿಸುವ ವಾಹನಗಳು :- ಮಂಗಳೂರು- ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ  169ರಲ್ಲಿ  ಬೈತುರ್ಲಿ ಬಸ್ ಸ್ಟಾಪ್ ನಿಂದ ಬೈತುರ್ಲಿ - ನೀರು ಮಾರ್ಗ - ಕಲ್ಪನೆ - ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಕಲ್ಪನೆ ಜಂಕ್ಷನ್‍ಗೆ ಬಂದು ಸುರತ್ಕಲ್ - ಕಬಕ ರಾಜ್ಯ ಹೆದ್ದಾರಿ 101 ನ್ನು ಸಂಪರ್ಕಿಸಿ,  ಪೆÇಳಲಿ ಹಾಗೂ ಬಿಸಿ.ರೋಡ್ ನ  ಎನ್‍ಎಚ್ ಗೆ ಸಂಚರಿಸಬೇಕು.

ಬಿಸಿ.ರೋಡ್-ಪೊಳಲಿ ಕಡೆಯಿಂದ ಮಂಗಳೂರು-ಗುರುಪುರ  ಕೈಕಂಬ ಕಡೆಗೆ ಸಂಚರಿಸುವ ವಾಹನಗಳು ಸುರತ್ಕಲ್ – ಕಬಕ ರಾಜ್ಯ ಹೆದ್ದಾರಿ  101 ರ ಕಲ್ಪನೆ-ನೀರುಮಾರ್ಗ- ಬೈತುರ್ಲಿ ಜಿಲ್ಲಾ ಮುಖ್ಯ ರಸ್ತೆಯ ಕಲ್ಪನೆ ರಸ್ತೆಯ ಮೂಲಕ  ಬೈತುರ್ಲಿ ಬಸ್‍ಸ್ಟಾಪ್ ಎಂಬಲ್ಲಿ ಮಂಗಳೂರು- ಸೋಲಾಪುರ್- ರಾಷ್ಟ್ರೀಯ ಹೆದ್ದಾರಿ  169 ನ್ನು ಸಂಪರ್ಕಿಸಿ ಮಂಗಳೂರು ಗುರುಪುರ ಕೈಕಂಬ ಕಡೆಗೆ ಸಂಚರಿಸುವಂತೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.