ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Nov 26, 2024 - 05:37
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ:
             ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 8

1.ಮೇಷ: 
ದಿನಗಳುರುಳುತ್ತಿದ್ದಂತೆ  ಮಹತ್ವದ ಜವಾಬ್ದಾರಿಗಳು. ಅನೇಕ ಕಾರ್ಯಗಳ ನಿರ್ವಹಣೆ. ವ್ಯವಹಾರ ಕ್ಷೇತ್ರದಲ್ಲಿ ಲಾಭ, ಕೀರ್ತಿಗಾಗಿ  ಮೇಲಾಟ. ಹಳೆಯ ಸಮಸ್ಯೆಗೆ ಸರಳ ವಿಧಾನದ ಪರಿಹಾರ.ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
 
2.ವೃಷಭ:
 ಜಾಗರೂಕತೆಯಿಂದ ಹೆಜ್ಜೆಯಿಡಿರಿ. ಉದ್ಯೋಗಸ್ಥರಿಗೆ ಪ್ರಗತಿ ಸ್ಥಿರ. ಆಪ್ತರಿಂದ ನೆರವಿನ ನಿರೀಕ್ಷೆ  ಸಾರ್ಥಕ.ಮನೆಯಲ್ಲಿ ದೇವತಾರಾಧನೆಯ ಸಂಭ್ರಮ.ವಾಹನ ಚಾಲನೆಯಲ್ಲಿ ಎಚ್ಚರ. ಗೃಹಿಣಿಯರಿಗೆ ಪುಟ್ಟ ಉದ್ಯಮ ಆರಂಭಿಸುವ ಉತ್ಸಾಹ. ಗಣೇಶ ಕವಚ, ವಿಷ್ಷು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.

3.ಮಿಥುನ:
ಚಿತ್ತ ಸ್ಥೈರ್ಯ, ಭಗವತ್ಕೃಪೆ ಇವೆರಡಿದ್ದರೆ ಜಯ ಖಚಿತ..ಪ್ರಾಮಾಣಿಕ ಅಧಿಕಾರಿಗಳ ಸತ್ವಪರೀಕ್ಷೆ. ಪೂರ್ವ ದಿಕ್ಕಿನಿಂದ ಶತ್ರುಬಾಧೆ. ವೃತ್ತಿಪರರಿಗೆ ಹೆಚ್ಚು ಜವಾಬ್ದಾರಿ.ಹತ್ತಿರದ ದೇವಾಲಯಕ್ಕೆ ಭೇಟಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


4.ಕರ್ಕಾಟಕ:
ಮುಂದೇನಾಗುವುದೆಂದು ಅತಿಯಾದ ಚಿಂತೆ ಬೇಡ.ಉದ್ಯೋಗಸ್ಥರಿಗೆ ಉತ್ತೇಜನದ ವಾತಾವರಣ. ಉದ್ಯಮಿಗಳಿಗೆ ಅನುಕೂಲದ ಸನ್ನಿವೇಶ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.ಸರ್ವರ ಕ್ಷೇಮಕ್ಕಾಗಿ ಪ್ರಾರ್ಥನೆಯಿಂದ ಶಾಂತಿ.ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

5.ಸಿಂಹ:
ಗಣೇಶನ ಕೃಪೆಗಾಗಿ ಪ್ರಾರ್ಥನೆಯಿಂದ ಶುಭ... ಉದ್ಯೋಗ ಕ್ಷೇತ್ರದಲ್ಲಿ ಸರ್ವರಿಂದ  ಪ್ರಶಂಸೆ.  ವ್ಯವಹಾರದಲ್ಲಿ ಅಭೂತಪೂರ್ವ ಯಶಸ್ಸು. ಆಪ್ತಮಿತ್ರರಿಗೆ ಸಹಾಯ ಮಾಡುವ ಅವಕಾಶ. ಜಿಹ್ವಾಚಾಪಲ್ಯವನ್ನು ದೂರವಿಡಿ.ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


6.ಕನ್ಯಾ:
ಅಡೆತಡೆಗಳ ಕಾಟ ಕಡಿಮೆಯಿರುವ ದಿನ. ಉದ್ಯೋಗ ರಂಗದಲ್ಲಿ ನಿರಾತಂಕದ ಮುನ್ನಡೆ.ಸ್ವಂತ ವ್ಯವಹಾರಸ್ಥರಿಗೆ ಸಕಾಲಿಕ ನೆರವು.ಲೆಕ್ಕ ಪರಿಶೋಧಕರಿಗೆ ಸಮಯದ ಒತ್ತಡ.ಗೃಹಿಣಿಯರ ಉದ್ಯಮಗಳಿಗೆ ಶುಭದಿನ. ಗಣಪತಿ ಅಥರ್ವಶೀರ್ಷ, ಆದಿತ್ಯ ಹೃದಯ, ದೇವೀಸ್ತೋತ್ರ ಓದಿ.

7.ತುಲಾ:
ಪಂಚಮ ಶನಿಯ ಬಾಧೆಯಿದ್ದರೂ ಗುರುವಿನ ಅನುಗ್ರಹ ಚೆನ್ನಾಗಿದೆ...  ದೇವತಾರ್ಚನೆ ,ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಹತ್ತಿರದ ದೇವತಾ ಸಾನ್ನಿಧ್ಯ ಸಂದರ್ಶನ. ಬಂಧುವರ್ಗದಲ್ಲಿ‌ ವಿವಾಹದ ಸಂಭ್ರಮ. . ಉದ್ಯೋಗ, ವ್ಯವಹಾರಗಳಲ್ಲಿ ಸುಧಾರಣೆ.ಗಣೇಶ ಕವಚ, ಶಿವಕವಚ, ಗುರುಸ್ತೋತ್ರ ಓದಿ.


8.ವೃಶ್ಚಿಕ:
ನಿಮ್ಮ ಆಯ್ಕೆಯಲ್ಲಿ ವಿವೇಕದ ಮೇಲುಗೈ ಆಗಲಿ.. ಉದ್ಯೋಗ ರಂಗದಲ್ಲಿ ಪ್ರತಿಭೆ ತೋರಿಸಲು  ಅವಕಾಶ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ.  ಉತ್ತರ  ದಿಕ್ಕಿನಿಂದ ಶುಭವಾರ್ತೆ.ವಸ್ತ್ರ, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಲಾಭ ತರುವ ದಿನ.ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

9.ಧನು:
ಕಾರ್ಯ ನಿರ್ವಿಘ್ನವಾಗಿ ಮುಕ್ತಾಯ.ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.ಹಿರಿಯರ ಮತ್ತು ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯಸಾಮರ್ಥ್ಯ ವೃದ್ಧಿಗೆ ಪ್ರಯತ್ನ. ಗುರುಸಮಾನರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ.ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

10.ಮಕರ:
ಪರಿಸರದಲ್ಲಿ ಅನಿರೀಕ್ಷಿತ ಘಟನೆಗಳು. ಮನೆಯಲ್ಲಿ  ಎಲ್ಲರ ಆರೋಗ್ಯ ಉತ್ತಮ.ಖಾಸಗಿ ರಂಗದ ಉದ್ಯೋಗಸ್ಥರಿಗೆ ಕೆಲಸದ ಒತ್ತಡ. ಲೆಕ್ಕಪರಿಶೋಧಕರು, ಮೊದಲಾದ ವೃತ್ತಿಪರರಿಗೆ  ಸಮಯ ಮಿತಿಯ ಆತಂಕ. ಕಿರಿಯರ ವಿವಾಹ ನಿಶ್ಚಯ.ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

11.ಕುಂಭ:
ಉದ್ಯೋಗ ರಂಗದಲ್ಲಿ ಗಣನಾರ್ಹ ಮುನ್ನಡೆ. ವ್ಯವಹಾರ ಕ್ಷೇತ್ರಕ್ಕೆ ಹೊಸಬರ ಪ್ರವೇಶ. ಸಮಾಜದಲ್ಲಿ ವಿಶೇಷ ಗೌರವ ಪ್ರಾಪ್ತಿ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ.ಬಂಧುವರ್ಗದಲ್ಲಿ ಶುಭಕಾರ್ಯ.ಗಣೇಶ ಅಷ್ಟಕ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

12.ಮೀನ:
ಏಳೂವರೆ ಶನಿಯ ಪ್ರಭಾವವಿದ್ದರೂ  ಶುಭಫಲಗಳೇ ಅಧಿಕ. ವಾಹನ ಸಂಬಂಧಿ ವ್ಯವಹಾರಸ್ಥರಿಗೆ ಸ್ಥಿರವಾದ ಆದಾಯ. ಇಲಾಖೆಗಳಿಂದ ಅನುಕೂಲಕರ ಸ್ಪಂದನ. ತಾಯಿಯ, ಮಾತೃಸಮಾನರ ಆರೋಗ್ಯ ಉತ್ತಮ. ಹತ್ತಿರದ ದೇವೀಕ್ಷೇತ್ರ ದರ್ಶನ ಸಂಭವ.ಗಣಪತಿ ಅಥರ್ವಶೀರ್ಷ, ಮುಕುಂದಮಾಲಾ, ಶನಿಸ್ತೋತ್ರ ಓದಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.