ಬೆಂಗಳೂರಿನಲ್ಲಿ ಫೆ.21, 22ರಂದು ಸ್ವರವಿ ಕಲಾ ಸಂಸ್ಥೆಯಿಂದ ' ಗಿರಿಧಾರಿ' ಭರತನಾಟ್ಯ ನೃತ್ಯ–ನಾಟಕ
ಬೆಂಗಳೂರು: ಸ್ವರವಿ ಕಲಾ ಸಂಸ್ಥೆಯು ಫೆಬ್ರವರಿ 21 ಮತ್ತು 22ರಂದು ಬೆಂಗಳೂರಿನ ದಯಾನಂದ ಸಾಗರ ವಿವಿ ಆಡಿಟೋರಿಯಂನಲ್ಲಿ ಗಿರಿಧಾರೀ ಎಂಬ ವೈಭವಮಯ ಭರತನಾಟ್ಯ ನೃತ್ಯ–ನಾಟಕವನ್ನು ಪ್ರಸ್ತುತಪಡಿಸಲಿದೆ.
ಎರಡೂ ದಿನಗಳು ಸಂಜೆ 6ರಿಂದ ಈ ಅಪರೂಪದ ಸಂಯೋಜನೆಯನ್ನು ಸಂಸ್ಥೆಯ ಸ್ಥಾಪಕಿ ಹಾಗೂ ನಿರ್ದೇಶಕಿ ವರ್ಷಾ ರವಿ ಪ್ರಕಾಶ್ ಅವರು ಸಂಯೋಜಿಸಿದ್ದಾರೆ. 55ಕ್ಕೂ ಹೆಚ್ಚು ಭರತನಾಟ್ಯ ಕಲಾವಿದರು ಒಂದೇ ವೇದಿಕೆಯಲ್ಲಿ ಭಾಗವಹಿಸಿ, ಭಾಗವತದ ಗೋವರ್ಧನ ಪ್ರಸಂಗವನ್ನು ರಾಧೆಯ ದೃಷ್ಟಿಕೋನದ ಮೂಲಕ ಪ್ರಸ್ತುತಪಡಿಸಲಿದ್ದಾರೆ.
ಕಥೆ ವೃಂದಾವನ ಹಿನ್ನೆಲೆಯಲ್ಲಿದ್ದು,
ನೃತ್ಯ–ನಾಟಕದಲ್ಲಿ ಶಾಸ್ತ್ರೀಯ ಭರತನಾಟ್ಯ ಹಾಗೂ ಸೂಕ್ಷ್ಮ ಅಭಿನಯದ ಜೊತೆಗೆ ಆಧುನಿಕ ವೇದಿಕೆ ತಂತ್ರಜ್ಞಾನಗಳಾದ ಹೋಲೊಗ್ರಾಮ್ಸ್, VFX, ಚಲಿಸುವ ಬೆಳಕು ವ್ಯವಸ್ಥೆ ಹಾಗೂ ನೈಜ ಸಮಯದ ಮಳೆ ಪರಿಣಾಮಗಳನ್ನು ಸಮರ್ಪಕವಾಗಿ ಅಳವಡಿಸಲಾಗಿದೆ. ಇದರಿಂದ ಕಲೆಯ ಶುದ್ಧತೆ ಮತ್ತು ಆತ್ಮವನ್ನು ಉಳಿಸಿಕೊಂಡೇ ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ಒದಗಿಸಲಾಗುತ್ತಿದೆ.
ವರ್ಷಾ ರವಿಪ್ರಕಾಶ್ ಅವರು ನಾಲ್ಕನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಯಲು ಆರಂಭಿಸಿದ್ದು, ನಂತರ ಇಂಜಿನಿಯರಿಂಗ್ ಪೂರ್ಣಗೊಳಿಸಿ ಎರಡು ವರ್ಷ ಸಾಫ್ಟ್ವೇರ್ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ.
“ಇಂಜಿನಿಯರಿಂಗ್ ಓದುತ್ತಿದ್ದಾಗಲೂ ನಾನು ನೃತ್ಯವನ್ನು ಬಿಡಲಿಲ್ಲ — ಅದು ನನ್ನ ಜೀವನದ ಆತ್ಮ,” ಎಂದು ಅವರು ಹೇಳುತ್ತಾರೆ. ಹತ್ತು ವರ್ಷಗಳ ಹಿಂದೆ ಭರತನಾಟ್ಯದಲ್ಲಿ ವಿದ್ಯ್ವತ್ ಪೂರ್ಣಗೊಳಿಸಿದ ಬಳಿಕ ಸಂಪೂರ್ಣವಾಗಿ ಈ ಕಲೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ಗಿರಿಧಾರೀ ಭಾರತೀಯ ಶಾಸ್ತ್ರೀಯ ನೃತ್ಯದ ಸೌಂದರ್ಯವನ್ನು ಆಧುನಿಕ ಪ್ರಸ್ತುತಿಕರಣದೊಂದಿಗೆ ಸಂಯೋಜಿಸಿ, ಪ್ರೇಕ್ಷಕರಿಗೆ ಆಧ್ಯಾತ್ಮಿಕ ಹಾಗೂ ದೃಶ್ಯ ವೈಭವದ ಅಪೂರ್ವ ಅನುಭವ ನೀಡಲಿದೆ.


