ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
- ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 5
1.ಮೇಷ:
ಪುಟಿದೇಳುವ ಕಾರ್ಯೋತ್ಸಾಹ. ಉದ್ಯೋಗ ಸ್ಥಾನದಲ್ಲಿ ಹೊಸ ನೋಟ. ಸ್ವಂತ ಉದ್ಯಮದ ಓಟ ಆರಂಭ. ನೌಕರರಿಗೆ ಹೆಚ್ಚಿದ ಉತ್ಸಾಹ.ಮಹಿಳೆಯರ ಗೃಹೋದ್ಯಮದ ಜನಪ್ರಿಯತೆ ಹೆಚ್ಚಳ.ಪಾಲುದಾರಿಕೆ ವ್ಯವಹಾರ ಅಭಿವೃದ್ಧಿ.ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ.ಗಣೇಶ ಕವಚ, ಆದಿತ್ಯ ಹೃದಯ, ವಿಷ್ಣು ಸಹಸ್ರನಾಮ ಓದಿ.
2.ವೃಷಭ:
ಅಪಾರ ಭರವಸೆಯೊಂದಿಗೆ ದಿನಾರಂಭ.ಉದ್ಯೋಗದಲ್ಲಿ ಯಥಾಸ್ಥಿತಿ. ಕೃಷಿ ಕ್ಷೇತ್ರಕ್ಕೆ ಯುವಜನರನ್ನು ಸೆಳೆಯಲು ಪ್ರಯತ್ನ . ಬಡವರಿಗೆ ಸರಕಾರಿ ಯೋಜನೆಗಳ ಸೌಲಭ್ಯ ದೊರಕಿಸಲು ಸಹಾಯ. ಮನೆ ವಿಸ್ತರಣೆಗೆ ಯೋಜನೆ.ಗೃಹದಲ್ಲಿ ಸಂತೃಪ್ತಿಯ ವಾತಾವರಣ.ಗಣಪತಿ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ದೇವೀಸ್ತೋತ್ರ ಓದಿ.
3.ಮಿಥುನ:
ಧೈರ್ಯ, ಸಾಹಸದ ಮನಸ್ಥಿತಿಯಿಂದ ಕಾರ್ಯದಲ್ಲಿ ಯಶಸ್ಸು.ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಉದ್ಯಮಗಳ ಅಭಿವೃದ್ಧಿಗೆ ವಿತ್ತಸಂಸ್ಥೆ ಸಹಾಯ. ವಸ್ತ್ರ , ಸಿದ್ಧ ಉಡುಪು ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ . ವ್ಯಾಪಾರಿಗಳಿಗೆ ತೆರಿಗೆ ವಿವರ ಒಪ್ಪಿಸುವ ಚಿಂತೆ..ದೇವತಾ ಕ್ಷೇತ್ರಕ್ಕೆ ಭೇಟಿ.ಮನೆಯಲ್ಲಿ ಸಂತೋಷದ ವಾತಾವರಣ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಲಕ್ಷ್ಮೀಸ್ರೋತ್ರ ಓದಿ.
4.ಕರ್ಕಾಟಕ:
ಪರಹಿತ ಸಾಧನೆಯ ಹಂಬಲದೊಡನೆ ಕಾರ್ಯಕ್ಷೇತ್ರ ಪ್ರವೇಶ.ಉದ್ಯೋಗ ಕ್ಷೇತ್ರದಲ್ಲಿ ಪದೋನ್ನತಿ. ಅಕಸ್ಮಾತ್ ಧನಾಗಮ ಯೋಗ. ದಕ್ಷಿಣ ದಿಕ್ಕಿನಿಂದ ಶುಭವಾರ್ತೆ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಕುಟುಂಬದ ಹಿರಿಯ ವ್ಯಕ್ತಿ ಆಗಮನ.ಎಲ್ಲರಿಗೂ ಉತ್ತಮ ಆರೋಗ್ಯ. ಗಣಪತಿ ಸ್ತೋತ್ರ, ಆಂಜನೇಯ ಸ್ತೋತ್ರ, ದೇವೀ ಕವಚ ಓದಿ.
5.ಸಿಂಹ:
ಅಪಾರ ಕಾರ್ಯಶಕ್ತಿಯೊಂದಿಗೆ ರಂಗ ಪ್ರವೇಶ.ಉದ್ಯೋಗ ಕ್ಷೇತ್ರದಲ್ಲಿ ಗುರುಸ್ಥಾನ ಭದ್ರ.ವಿಸ್ತೃತ ಕಾರ್ಯಕ್ಷೇತ್ರದಲ್ಲಿ ಉದ್ಯಮದ ಪ್ರಗತಿ. ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ.ದೊಡ್ಡ ಪ್ರಮಾಣದ ಕೃಷಿ ಆರಂಭ ಯೋಜನೆಗೆ ಶ್ರೀಕಾರ.ಹಿರಿಯರು, ಗೃಹಿಣಿಯರು ಮಕ್ಕಳಿಗೆ ಸಮಾಧಾನ.ಗಣೇಶ ಅಷ್ಟೋತ್ತರ, ವಿಷ್ಣು ಸಹಸ್ರನಾಮ, ಶಿವಸ್ರೋತ್ರ ಓದಿ.
6.ಕನ್ಯಾ:
ಒಂದೇ ವೃತ್ತಿಯನ್ನು ಅವಲಂಬಿಸುವ ಪ್ರಯತ್ನ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ತಂದೆಯ ಕಡೆಯ ಹಿರಿಯ ವ್ಯಕ್ತಿಯ ಸಹಕಾರ.ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಅನುಕೂಲ ವಾತಾವರಣ.ಗಣೇಶ ಕವಚ, ವೆಂಕಟೇಶ ಸ್ತೋತ್ರ , ಹನುಮಾನ್ ಚಾಲೀಸಾ ಓದಿ.
7.ತುಲಾ:
ಭಯೋತ್ಪಾದಕರಂತೆ ತೋರುವ ಕಾಗದದ ಹುಲಿಗಳನ್ನು ನಿರ್ಲಕ್ಷಿಸಿ. ಉದ್ಯೋಗದಲ್ಲಿ ಸೂಕ್ತ ಗೌರವ ಪ್ರಾಪ್ತಿ. ಹಿತಶತ್ರುಗಳಿಗೆ ಸೋಲು ಸನ್ನಿಹಿತ.ಗುರುಸ್ಥಾನದಲ್ಲಿರುವ ಹಿರಿಯರ ಭೇಟಿ. ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನಸ್ಸಮಾಧಾನ. ಮಕ್ಕಳ ಪ್ರತಿಭೆಗೆ ಶಾಲೆಯಲ್ಲಿ ಪ್ರಶಂಸೆ . ಎಲ್ಲರಿಗೂ ಉತ್ತಮ ಆರೋಗ್ಯ.ಗಣಪತಿ ಸ್ತೋತ್ರ, ಹನಮಾನ್ ಚಾಲೀಸಾ ಓದಿ.
8.ವೃಶ್ಚಿಕ:
ಪ್ರತಿಕೂಲ ಪರಿಸರದಲ್ಲಿ ದೇಹ, ಮನಸ್ಸುಗಳ ಸ್ವಾಸ್ಥ್ಯವನ್ನು ಕಾಯ್ದುಕೊಂಡ ಸಮಾಧಾನ.ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮಕ್ಕೆ ಎದುರಾಳಿಗಳಿಂದ ಪೈಪೋಟಿ
ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಸಹಕಾರಿ ಸಂಸ್ಥೆಗಳ ಸಮಸ್ಯೆ ನಿವಾರಣೆ. .ಸಂಸಾರದಲ್ಲಿ ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದದ ಸನ್ನಿವೇಶ.ಗಣೇಶ ಸ್ರೋತ್ರ, ನರಸಿಂಹ ಸ್ತೋತ್ರ ಓದಿ.
9.ಧನು:
ದೈವಭಕ್ತಿ, ಆತ್ಮವಿಶ್ವಾಸದೊಂದಿಗೆ ಪಟ್ಟುಬಿಡದ ಪ್ರಯತ್ನದಿಂದ ಕಾರ್ಯಸಾಧನೆ. ಸಹೋದ್ಯೋಗಿಗಳಿಗೆ ಹರ್ಷ. ಬಾಲ್ಯದ ಒಡನಾಡಿಯಿಂದ ಸಣ್ಣ ಉದ್ಯಮ ಘಟಕದ ಸ್ಥಾಪನೆ .ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಜೇನು ಸಾಕಣೆ ಆರಂಭಿಸಲು ನಿರ್ಧಾರ. ಮರಳಿ ಪಡೆದ ಹಿರಿಯರ ಆಸ್ತಿಯಲ್ಲಿ ಕೃಷಿ ಆರಂಭ.ಗಣೇಶ ಸ್ತೋತ್ರ, ಲಕ್ಷ್ಮೀ ನೃಸಿಂಹ ಸ್ತೋತ್ರ ಪಾರಾಯಣ ಮಾಡಿ.
10.ಮಕರ:
ಮನಸ್ಸಿನ ಚಾಂಚಲ್ಯ ತೊಲಗಿಸುವ ಪ್ರಯತ್ನ ಸಾರ್ಥಕ.ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ಪ್ರಯತ್ನ ಯಶಸ್ವಿ. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ.ಪ್ರಾಪ್ತ ವಯಸ್ಕ ಕನ್ಯೆಯರ ವಿವಾಹಕ್ಕೆ ಪ್ರಯತ್ನ. ಗಣಪತಿ,ಶಿವ, ವಿಷ್ಣು ಸ್ತೋತ್ರಗಳನ್ನು ಓದಿ.
11.ಕುಂಭ:
ಕುಗ್ಗದ ಕಾರ್ಯೋತ್ಸಾಹದೊಂದಿಗೆ ಕಾರ್ಯರಂಗಕ್ಕೆ ಪ್ರವೇಶ.ಉದ್ಯೋಗ ಸ್ಥಾನದಲ್ಲಿ ಹಲವರಿಗೆ ಮಾರ್ಗದರ್ಶನ .ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡ.ಸಾಮಾಜಿಕ ವಲಯದ ಆಪ್ತರಿಂದ ಸಹಾಯದ ಕೊಡುಗೆ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಆಯೋಜಿತ ಸೇವಾ ಕಾರ್ಯಗಳಲ್ಲಿ ಭಾಗಿ. ಗಣೇಶ ಕವಚ, ನವಗ್ರಹ ಸ್ತೋತ್ರ, ವಿಷ್ಣು ಸಹಸ್ರನಾಮ ಓದಿ.
12.ಮೀನ:
ಎಂದಿನಂತೆ ಇಂದೂ ಹಲವು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳನ್ನು ಗಮನಿಸುವ ಅನಿವಾರ್ಯತೆ. ಸರಕಾರಿ ಇಲಾಖೆಗಳವರ ಸಕಾರಾತ್ಮಕ ಸ್ಪಂದನ.ಕಾರ್ಯ ನಿರ್ವಹಣೆಗೆ ಸಾರ್ವಜನಿಕರ ಪ್ರಶಂಸೆ. ಕೃಷಿ ಆಧಾರಿತ ಉದ್ಯಮ ಘಟಕ ಸ್ಥಾಪನೆ ಪ್ರಯತ್ನ . ಉದ್ಯೋಗ ಬಯಸುವವರಿಗೆ ಅವಕಾಶಗಳು ಗೋಚರ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಪಾರಾಯಣ ಮಾಡಿ.