ಪಡುಮಲೆಯಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷರಾಗಿ ಭಾರತಿ ರೈ ಕುದ್ಕಾಡಿ
ವರಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧೆ, ಭಕ್ತಿಯಿಂದ ಊರವರು ಸೇರಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು
ಪುತ್ತೂರು, ಜೂನ್ 15: ಪಡುಮಲೆಯ ವರಮಹಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾಗಿ ಭಾರತಿ ರೈ ಕುದ್ಕಾಡಿ ಆಯ್ಕೆಯಾಗಿದ್ದಾರೆ.
ಪಡುಮಲೆಯು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೂನ್ 13ರಂದು ಈ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆಯ ಪೂರ್ವಭಾವಿ ಸಭೆ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ರೈ ಕಟ್ಟಾವು, ಸದಸ್ಯರಾದ ಜನಾರ್ಧನ ಪೂಜಾರಿ ಪದಡ್ಕ, ಪುರಂದರ ರೈ ಕುಧ್ಕಾಡಿ, ಉದಯಕುಮಾರ್ ರತ್ನಮಾನಸ ಪಡುಮಲೆ ಇವರ ಉಪಸ್ಥಿತಿಯಲ್ಲಿ ನಡೆಯಿತು.
ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ವಾಣಿಶ್ರೀ ಉದಯಕುಮಾರ್ ರತ್ನಮಾನಸ ಪಡುಮಲೆ, ಅಧ್ಯಕ್ಷರಾಗಿ ಶ್ರೀಮತಿ ಭಾರತಿ ರೈ ಕುದ್ಕಾಡಿ, ಕಾರ್ಯದರ್ಶಿಯಾಗಿ ಶ್ರೀಮತಿ ಭವ್ಯ ವೇಣುಗೋಪಾಲ್ ಪಡುಮಲೆ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ವಿನೋದ ರೈ ಸೇನೆರೆಮಜಲು, ಕೋಶಾಧಿಕಾರಿಗಳಾಗಿ ಶ್ರೀಮತಿ ಸುನಿತಾ ರೈ ಮೇಗಿನಮನೆ ಆಯ್ಕೆಗೊಂಡಿರುತ್ತಾರೆ. ಗೌರವ ಸಲಹೆಗಾರರಾಗಿ ಶ್ರೀಮತಿ ವೀಣಾ ಶ್ರೀನಿವಾಸ ಭಟ್ ಚಂದುಕೂಡ್ಲು ,ಶ್ರೀಮತಿ ಸುಧಾ ಎಸ್ ರೈ ಕಟ್ಟಾವು, ಶ್ರೀಮತಿ ಶಂಕರಿ ನಾರಾಯಣ ಪಟ್ಟೆ ,ಶ್ರೀಮತಿ ಮಲ್ಲಿಕಾ ಕೋಡಿಯಡ್ಕ , ಶ್ರೀಮತಿ ಶ್ರೀಮತಿ ಸುಳ್ಯ ಪದವು ಶ್ರೀಮತಿ ಸುಲೋಚನಾ ನೇರ್ಲಂಪಾಡಿ, ಶ್ರೀಮತಿ ಪ್ರೇಮ ಮೈಂದನಡ್ಕ, ಶ್ರೀಮತಿ ಪ್ರೇಮ ರೈ ಮೈಯಿಂದಡ್ಕ ಶ್ರೀಮತಿ ರಮಾಾಕಾಂತಿ ಸುಳ್ಯಪದವು, ಶ್ರೀಮತಿ ಉಮಾವತಿ ಮೈಂದನಡ್ಕ, ಶ್ರೀಮತಿ ಯಶೋಧ ,ಶ್ರೀಮತಿ ವಿದ್ಯಾಶ್ರೀ ರೈ ಸೇನೆರೆ ಮಜಲು, ದೇವಿಪ್ರಭ ರೈ ನೆಕ್ಕರೆ, ಶ್ರೀಮತಿ ಸುಜಾತ ಏರಾಜೆ, ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಸದಸ್ಯರುಗಳಾಗಿ ಪುಷ್ಪಾವತಿ ಪೇರಾಲು, ಪದ್ಮಲತಾ ಪೇರಾಲು, ಲತಾ ಕಟ್ಟಾವು, ಭವ್ಯ ಮೈಂದನಡ್ಕ, ಮೋಹಿನಿ ರೈ ದೊಡ್ಡಡ್ಕ ಇವರುಗಳು ಆಯ್ಕೆಗೊಂಡಿರುತ್ತಾರೆ.


