ಮಂಗಳೂರು, ಮಾ.18(ಕ.ವಾ):- ಅಬಕಾರಿ ಅಧಿಕಾರಿಗಳು ತಲಪಾಡಿ ಕೆ.ಸಿ ರೋಡ್ ಬಳಿ ಮಂಗಳವಾರ ದಾಳಿ ನಡೆಸಿದ್ದು, ನಿಶಾಧ್ ಬಿನ್ ಅಬ್ದುಲ್ ಕರೀಮ್ ಹಾಗೂ ಅಹ್ಮದ್ ಇಮ್ರಾನ್ ಬಿನ್ ಅಬ್ದುಲ್ ಹಕೀಮ್ ಎಂಬ ಇಬ್ಬರು ಎಂ.ಡಿ.ಎಂ.ಎ ಮಾದಕದ್ರವ್ಯ ಸೇವಿಸುತ್ತಿದ್ದ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಅಬಕಾರಿ ಉಪಧೀಕ್ಷಕಿ ಗಾಯತ್ರಿ ಸಿ ಹೆಚ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ದತ್ತಗುರು ಹಾಗೂ ಉಪ ನಿರೀಕ್ಷಕ ಹರೀಶ್ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.