ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಡೈಮಂಡ್ ಫೆಸ್ಟ್‌ ಲಕ್ಕಿ ಡ್ರಾ

ಮುಳಿಯ ಗೋಲ್ಡ್‌ ಅಂಡ್‌ ಡೈಮಂಡ್‌ ಆಯೋಜಿಸಿದ್ದ ಡೈಮೆಂಡ್‌ ಫೆಸ್ಟ್‌ನ ಲಕ್ಕಿ ಡ್ರಾದ ಬಂಪರ್ ಬಹುಮಾನವಾದ ಇವಿ ಸ್ಕೂಟರ್ ಅನ್ನು ರಕ್ಷಿತಾ ಪೂಜಾರಿ ಅವರು ಗೆದ್ದುಕೊಂಡರು. ಜತೆಗೆ ಜಾನ್ವಿ ಮನೀಶಿ ಕೊಂಬೆಟ್ಟು ಹಾಗೂ ಅನುಷಾ ವೈ. ಕಾಶಿಬೆಟ್ಟು ಅವರು ಇತರೆ ಪ್ರಮುಖ ಬಹುಮಾನಗಳನ್ನು ಪಡೆದುಕೊಂಡರು.

Jun 16, 2026 - 23:32
ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಡೈಮಂಡ್ ಫೆಸ್ಟ್‌ ಲಕ್ಕಿ ಡ್ರಾ
muliya god and diamond lucky draw

ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪುತ್ತೂರು ಹಾಗೂ ಬೆಳ್ತಂಗಡಿ ಶೋರೂಂಗಳ ವತಿಯಿಂದ ಆಯೋಜಿಸಲಾದ ಡೈಮಂಡ್‌ ಫೆಸ್ಟ್‌ನ ಅಂಗವಾಗಿ ಪುತ್ತೂರು ಶೋರೂಂನಲ್ಲಿ ಲಕ್ಕಿ ಡ್ರಾ ಕಾರ್ಯಕ್ರಮ ನಡೆಯಿತು.

ಮಾ. 28ರಿಂದ ಮೇ 10ರ ವರೆಗೆ ನಡೆದ ಡೈಮಂಡ್ ಫೆಸ್ಟ್ ಅವಧಿಯಲ್ಲಿ ವಜ್ರಾಭರಣಗಳನ್ನು ಖರೀದಿಸಿದ ಗ್ರಾಹಕರಿಗೆ ಲಕ್ಕಿ ಡ್ರಾ ಕೂಪನ್ ಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ ಆಯ್ಕೆಯಾದ ಅದೃಷ್ಟಶಾಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿತ್ತು. ಗ್ರಾಹಕರಿಂದದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದ ಡೈಮಂಡ್ ಫೆಸ್ಟ್ ಯಶಸ್ವಿಯಾಗಿ ಸಂಪನ್ನಗೊಂಡಿತು.

ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಲಕ್ಕಿ ಡ್ರಾ ನಡೆಸಿ ವಿಜೇತರನ್ನು ಆಯ್ಕೆ ಮಾಡಿದ ಪುತ್ತೂರು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್‌ ನಡುಬೈಲು ಅವರು ಮಾತನಾಡಿ, ನಂಬಿಕೆಗೆ ಇನ್ನೊಂದು ಹೆಸರೇ ಮುಳಿಯವಾಗಿದ್ದು, ಹೀಗಾಗಿ ನಮಗೆ ಸಂಸ್ಥೆಯ ಬಗ್ಗೆ ವಿಶೇಷ ಅಭಿ ಮಾನದ ಜತೆಗೆ ವಿಶ್ವಾಸವಿದೆ ಎಂದರು.


ಲಕ್ಕಿ  ಡ್ರಾದ ಬಂಪರ್ ಬಹುಮಾನವಾದ ಇವಿ ಸ್ಕೂಟರ್ ಅನ್ನು ರಕ್ಷಿತಾ ಪೂಜಾರಿ ಗೆದ್ದುಕೊಂಡರು. ಜತೆಗೆ ಜಾನ್ವಿ ಮನೀಶಿ ಕೊಂಬೆಟ್ಟು ಹಾಗೂ ಅನುಷಾ ವೈ. ಕಾಶಿಬೆಟ್ಟು ಅವರು ಇತರೆ ಪ್ರಮುಖ ಬಹುಮಾನಗಳನ್ನು ಪಡೆದುಕೊಂಡರು.

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅವರು ಮಾತನಾಡಿ, ನಮ್ಮ ಸಂಸ್ಥೆಯ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸ ಮತ್ತು ಪ್ರೀತಿಯೇ ನಮ್ಮ ಬೆಳವಣಿಗೆಯ ಮೂಲಾಧಾರ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಭರಣಗಳ ಜತೆಗೆ ವಿಶೇಷ ಖರೀದಿ ಅನುಭವವನ್ನು ನೀಡುವ ಉದ್ದೇಶದಿಂದ ಡೈಮಂಡ್ ಫೆಸ್ಟ್ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ನೀಡಿದ ಎಲ್ಲಾ ಗ್ರಾಹಕರಿಗೆ ನಾವು ಹೃತ್ತೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಪುತ್ತೂರು ಶಾಖಾ ಪ್ರಬಂಧಕರಾದ ರಾಘವೇಂದ್ರ ಪಟೇಲ್ ಮತ್ತು ಬೆಳ್ತಂಗಡಿ ಶಾಖಾ ಪ್ರಬಂಧಕರಾದ  ಲೋಹಿತ್ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಜ್ರಾಭರಣಗಳ ವಿಶೇಷತೆ, ಗುಣಮಟ್ಟ ಹಾಗೂ ಅವುಗಳ ಮೌಲ್ಯದ ಕುರಿತು ವೇಣು ಶರ್ಮಾ ಅವರು ಪ್ರಶೋತ್ತರ ರೂಪದಲ್ಲಿ ಗ್ರಾಹಕರಿಗೆ ಉಪಯುಕ್ತ ಮಾಹಿತಿ ನೀಡಿದರು. ಡೈಮಂಡ್ ಫೆಸ್ಟ್‌ನಲ್ಲಿ ಭಾಗವಹಿಸಿದ ಎಲ್ಲ ಗ್ರಾಹಕರಿಗೂ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಿಬಂದಿ ವರ್ಗಕ್ಕೂ ಸಂಸ್ಥೆಯ ವತಿಯಿಂದ ಕೃತಜ್ಞತೆ ಅರ್ಪಿಸಲಾಯಿತು.

ಪುತ್ತೂರು ಶಾಖಾ ಪ್ರಬಂಧಕ ರಾಘವೇಂದ್ರ ಪಟೇಲ್ ಸ್ವಾಗತಿಸಿದರು. ಆನಂದ್ ಕುಲಾಲ್ ವಂದಿಸಿದರು. ಮೃದುಲ ಅವರು ನಿರೂಪಿಸಿದರು.