ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಸ್ವಾಮಿಗೆ ಕ್ಷೀರಾಭಿಷೇಕ
Ishwaramangala: July 12 Kodandarama & Panchmukhi Anjaneya Swami Ksheerabhishekam: ಜುಲೈ 12 ಭಾನುವಾರದಂದು ಈಶ್ವರಮಂಗಲದ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಸ್ವಾಮಿಗೆ ಸಾವಿರ ಲೀಟರ್ ಕ್ಷೀರಾಭಿಷೇಕವನ್ನು ನಡೆಸಲಾಗುತ್ತದೆ.
ಪುತ್ತೂರು: ಜುಲೈ 12 ಭಾನುವಾರದಂದು ಈಶ್ವರಮಂಗಲದ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಸ್ವಾಮಿಗೆ ಸಾವಿರ ಲೀಟರ್ ಕ್ಷೀರಾಭಿಷೇಕವನ್ನು ನಡೆಸಲಾಗುತ್ತದೆ. ಬೆಂಗಳೂರಿನ ಉದ್ಯಮಿ ಬಾಲಕೃಷ್ಣ ಅವರ ಸೇವಾರ್ಥ, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಈ ಸೇವಾ ಕಾರ್ಯವು ಜರುಗಲಿದೆ.
ಅಂದು ಬೆಳಗ್ಗೆ 6 ರಿಂದ 8 ರವರೆಗೆ ಸುಪ್ರಭಾತ (ಸದಾನಂದ ಶಾಸ್ತ್ರಿ) ಸೇವೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಕೋದಂಡರಾಮ ಸ್ವಾಮಿಗೆ 1000 ಲೀಟರ್ ಕ್ಷೀರಾಭಿಷೇಕ ಹಾಗೂ ಮಹಾಪೂಜೆ ನೆರವೇರಿಸಲಾಗುತ್ತದೆ. ಆ ಬಳಿಕ ಪ್ರಸಾದ ವಿತರಣೆ ಮಾಡಲಾಗುತ್ತದೆ.
ಬೆಳಗ್ಗೆ 10 ರಿಂದ 12.30 ರವರೆಗೆ ಸಾಮೂಹಿಕ ಭಜನೆ (300 ಭಜಕರಿಂದ) ಏರ್ಪಡಿಸಲಾಗಿದೆ. ಬೆಳಗ್ಗೆ 10.30ಕ್ಕೆ ಪಂಚಮುಖಿ ಆಂಜನೇಯ ಸ್ವಾಮಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ. ಅನ್ನಸಂತರ್ಪಣೆಗೂ ವ್ಯವಸ್ಥೆ ಕಲ್ಪಿಸಲಾಗಿದೆ.


