ಪುತ್ತೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಕೆ. ಗೆಲುವು

ಮುಂದಿನ ಎರಡು ವರ್ಷಗಳ ಅವಧಿಗೆ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿ ಸಂತೋಷ್‌ ಕುಮಾರ್‌ ಕೆ. ಅವರು ಅಧಿಕಾರ ನಡೆಸಲಿದ್ದಾರೆ.

Jul 23, 2026 - 19:28
ಪುತ್ತೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಕೆ. ಗೆಲುವು

ಪುತ್ತೂರು: ಪುತ್ತೂರು ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸಂತೋಷ್‌ ಕುಮಾರ್‌ ಕೆ. ಅವರು ಗೆಲುವು ಸಾಧಿಸಿದ್ದಾರೆ.

2026-27ರಿಂದ 2027-28ನೇ ಸಾಲಿನ ಅಂದರೆ, ಮುಂದಿನ ಎರಡು ವರ್ಷಗಳ ಅವಧಿಗೆ ಇಂದು ಬೆಳಿಗ್ಗೆ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಂತೋಷ್ ಕುಮಾರ್ ಕೆ. ಅವರು ಸ್ಪರ್ಧಿಸಿದ್ದು, ಅವರು ಅಮೋಘ ಗೆಲುವು ಸಾಧಿಸಿ ಮುಂದಿನ ಎರಡು ವರ್ಷಗಳಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮಹಾಬಲ ಶೆಟ್ಟಿ ಕೊಮ್ಮಂಡ, ಕಾರ್ಯದರ್ಶಿ ಸ್ಥಾನಕ್ಕೆ ಸ್ವಾತಿ ಜಗನ್ನಾಥ ರೈ ಅವರು ಮತ್ತು ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಉದಯಚಂದ್ರ ಕರಂಬಾರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಚುನಾವಣಾಧಿಕಾರಿಗಳಾಗಿ ಎಸ್‌. ಪ್ರವೀಣ್‌ ಕುಮಾರ್‌, ಜಯಾನಂದ ಕೆ. ಹಾಗೂ ಮನೋಹರ್‌ ಎ. ಅವರು ಕರ್ತವ್ಯ ನಿರ್ವಹಿಸಿದ್ದರು.