ಪೆರುವಾಯಿ: ನೂತನ ಆಟೋರಿಕ್ಷಾ ತಂಗುದಾಣ ಉದ್ಘಾಟನೆ

Peruvai: ಪೆರುವಾಯಿ ಗ್ರಾಮದ ಜಂಕ್ಷನ್ ಬಳಿ, ನೂತನ ಆಟೋರಿಕ್ಷಾ ತಂಗುದಾಣ ನಿರ್ಮಾಣಗೊಂಡಿದ್ದು, ಶಾಸಕ ಅಶೋಕ್ ರೈ ಅವರು ಉದ್ಘಾಟಿಸಿದರು.

Aug 6, 2026 - 18:00
Aug 6, 2026 - 18:01
ಪೆರುವಾಯಿ: ನೂತನ ಆಟೋರಿಕ್ಷಾ ತಂಗುದಾಣ ಉದ್ಘಾಟನೆ

ಪುತ್ತೂರು: ಪೆರುವಾಯಿ ಗ್ರಾಮದ ಜಂಕ್ಷನ್ ಬಳಿ, ನೂತನ ಆಟೋರಿಕ್ಷಾ ತಂಗುದಾಣ ನಿರ್ಮಾಣಗೊಂಡಿದ್ದು, ಶಾಸಕ ಅಶೋಕ್ ರೈ ಅವರು ಉದ್ಘಾಟಿಸಿದರು.   

ಹೊಸ ತಂಗುದಾಣಕ್ಕಾಗಿ ಈ ಭಾಗದ ರಿಕ್ಷಾ ಚಾಲಕರು ಬಹುದಿನಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು. ಸದ್ಯ ಶಾಸಕರ ಅನುದಾನದಲ್ಲಿ ನಿರ್ಮಿಸಲಾಗಿದೆ. 

ಈ ವೇಳೆ ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಇಂಟಕ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ನ್ಯಾಯವಾದಿ ಭಾಸ್ಕರ ಪೆರುವಾಯಿ, ರಾಮಣ್ಣ ಪಿಲಿಂಜ, ಅಬ್ದಲ್ ಕರೀಂ ಕುದ್ದುಪದವು, ರಾಜೇಂದ್ರನಾಥ್ ರೈ, ನಫೀಸಾ ಪೆರುವಾಯಿ, ಶ್ರೀಧರ ಬಾಳೆಕಲ್ಲು, ರಶ್ಮಿ ಎಂ, ಸಮೀರ್ ಬದಿಯಾರು, ಕೆ.ಮಹಮ್ಮದ್, ವಿನ್ಸೆಂಟ್ ಡಿಸೋಜ, ಗೋಪಾಲಕೃಷ್ಣ ನಾಯ್ಕ್, ರಂಜಿತ್ ಮಾರ್ಲ, ಸತೀಶ ಮಣಿಯಾಣಿ, ಶಾಫಿ ಸೇನೆರಪಾಲು ಜಯರಾಮ ಶೆಟ್ಟಿ ಬದಿಯಾರು, ಅಬ್ದುಲ್ಲ ಕಾನ, ಲಿಯೋ ಡಿಸೋಜ, ಜಿ.ಎಸ್.ಕುಮಾರ್ ಹಾಗೂ ಅಶೋಕ್ ಡಿಸೋಜ ಮುಳ್ಳಚ್ಚಿ ಉಪಸ್ಥಿತರಿದ್ಧರು.