ದಿನ ಭವಿಷ್ಯ
04-10-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 4
೧.ಮೇಷ:
ದೇಹಬಲ, ಮನೋಬಲಗಳು ಸಮ್ಮಿಲಿತವಾದಾಗ ಕಾರ್ಯಕ್ಕೆ ವೇಗ. ಉದ್ಯೋಗ , ಉದ್ಯಮದ ಕುರಿತು ಚಿಂತನೆ. ಅಪರೂಪದ ನೆಂಟರೊಂದಿಗೆ ಸಮಾಗಮ. ಮುಂದಿನ ಯೋಜನೆಗಳ ಬಗೆಗೆ ಪಾಲುದಾರರೊಂದಿಗೆ ವಿಚಾರ ವಿನಿಮಯ.ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ದ್ವಾದಶನಾಮ ಸ್ತೋತ್ರ, ಶಿವ ಸಹಸ್ರನಾಮ, ಶನಿಮಹಾತ್ಮೆ ಓದಿ.
೨.ವೃಷಭ:
ಕಾರ್ಯಕ್ಕೆ ಇನ್ನಷ್ಟು ಆಯಾಮಗಳನ್ನು ಸೇರಿಸಲು ಸಮಾಲೋಚನೆ. ಅಪರೂಪದ ಅತಿಥಿಗಳ ಆಗಮನ. ದೇವತಾ ಸಾನ್ನಿಧ್ಯದಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ. ಕೃಷಿ ಕ್ಷೇತ್ರದಲ್ಲಿ ಸಮಾರಂಭ ಆಯೋಜನೆ. ಹಿರಿಯ ವಿದ್ವಾಂಸರಿಗೆ ಸಾಮಾಜಿಕರಿಂದ ಸಮ್ಮಾನ. ಗಣಪತಿ ಅಥರ್ವಶೀರ್ಷ, ನರಸಿಂಹ ಸ್ತೋತ್ರ, ಗುರು ಸ್ತೋತ್ರ ಓದಿ.
೩ಮಿಥುನ:
ಹಬ್ಬ ಮುಗಿದರೂ ಹಬ್ಬದ ಮನಸ್ಥಿತಿ ಮುಂದುವರಿಕೆ. ದೇವತಾ ಕಾರ್ಯಗಳಲ್ಲಿ ಭಾಗಿ. ಧರ್ಮಶಾಸ್ತ್ರಜ್ಞರ ಉಪನ್ಯಾಸ ಕಾರ್ಯಕ್ರಮ ಮುಂದುವರಿಕೆ. ಕುಟುಂಬದಲ್ಲಿ ಕಿರಿಯರ ವಿವಾಹ ಪ್ರಸ್ತಾವ. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರ ವಿಸ್ತರಿಸಲು ಉಪಕ್ರಮ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿ ಸ್ತೋತ್ರ ಓದಿ.
೪. ಕರ್ಕಾಟಕ:
ಕುಟುಂಬದ ಸದಸ್ಯರ ಸಮ್ಮಿಲನ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳ ಮಾರಾಟಗಾರರಿಗೆ ವ್ಯಾಪಾರದ ಭರಾಟೆ. ಮನೆಯ ಸಮಾರಂಭಕ್ಕೆಗಣ್ಯರ ಆಗಮನ. ಅವಿವಾಹಿತರಿಗೆ ವಿವಾಹದ ಪ್ರಸ್ತಾವ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೫.ಸಿಂಹ:.
ಕುಟುಂಬದ ಸಮಗ್ರ ವ್ಯವಹಾರ ವಿಸ್ತರಣೆ. ಉದ್ಯಮದ ನೌಕರರಿಗೆ ಆರ್ಥಿಕ ಪ್ರೋತ್ಸಾಹ. ವ್ಯವಹಾರ ಅಭಿವೃದ್ಧಿಯ ಸಂಬಂಧ ಸಮಾಲೋಚನೆ. ಹಿರಿಯರ ಮನೆಯಲ್ಲಿ ಬಂಧುಗಳ ಭೇಟಿ. ಪೂರ್ವ ದಿಕ್ಕಿನಿಂದ ಕುಟುಂಬಕ್ಕೆ ಶುಭವಾರ್ತೆ. ಗಣೇಶ ಅಷ್ಡಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೬.ಕನ್ಯಾ:
ಮುಖ್ಯವಾದ ತುರ್ತು ಕಾರ್ಯವೊಂದಕ್ಕೆ ಸಿದ್ಧತೆಗಳು. ಸಮಾಜದ ಗಣ್ಯರ ಸಮ್ಮಿಲನದಲ್ಲಿ ಭಾಗಿಯಾಗುವಿರಿ. ದೀರ್ಘಕಾಲದ ಆಸ್ತಿ ವಿವಾದಕ್ಕೆ ಸರ್ವಸಮ್ಮತ ಪರಿಹಾರ. ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಪುತ್ರನ ವಿವಾಹದ ಸಿದ್ಧತೆಗಳು. ಗಣೇಶ ದ್ವಾದಶನಾಮ ಸ್ತೋತ್ರ, ವೆಂಕಟೇಶ್ವರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೭. ತುಲಾ:
ಅಪರೂಪದಲ್ಲಿ ಅತಿಥಿ ಸತ್ಕಾರ ಯೋಗ. ಉದ್ಯೋಗ ಅರಸುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಲಭ್ಯ. ಆಧ್ಯಾತ್ಮಿಕ ಚಿಂತನೆ, ಸದ್ಗ್ರಂಥ ಪಾರಾಯಣ, ಸಂಗೀತ ಶ್ರವಣ, ಭಜನೆ, ಕೀರ್ತನೆಗಳಲ್ಲಿ ಕಾಲಯಾಪನೆ. ಅಪರೂಪದ ವ್ಯಕ್ತಿಯೊಬ್ಬರ ಆಗಮನ. ಗಣೇಶ ಕವಚ, ಆಂಜನೇಯ ಸ್ತೋತ್ರ ಓದಿ.
೮.ವೃಶ್ಚಿಕ:
ಉದ್ಯೋಗ ಸ್ಥಾನದಲ್ಲಿ ಕೆಲಸದ ಉತ್ಸಾಹ. ಉದ್ಯೋಗ ಅನ್ವೇಷಣೆ ಯಶಸ್ವಿಯಾಗುವ ಸೂಚನೆ. ಧಾರ್ಮಿಕ ಸ್ವರೂಪದ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಚಿಂತನೆಗೆ ಅವಕಾಶ ಕಲ್ಪನೆ. ನೊಂದವರ ಸಾಂತ್ವನಕ್ಕೆ ಸಂದರ್ಭದ ಸದುಪಯೋಗ. ಟೈಲರಿಂಗ್ ಬಲ್ಲವರಿಗೆ ಸದವಕಾಶ. ಗಣೇಶ ಪಂಚರತ್ನ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೯.ಧನು:
ಸರಕಾರಿ ನೌಕರರಿಗೆ ಸ್ವಲ್ಪ ನೆಮ್ಮದಿ. ಉದ್ಯೋಗಾರ್ಥಿಗಳಿಗೆ ನೆರವು. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಹಳೆಯ ಒಡನಾಡಿಯ ಅನಿರೀಕ್ಷಿತ ಭೇಟಿಯ ಆನಂದ. ಗಣಪತಿ ಅಥರ್ವಶೀರ್ಷ, ಶಿವ ನಾಮಾವಲ್ಯಷ್ಟಕ, ನವಗ್ರಹ ಸ್ತೋತ್ರ ಓದಿ.
೧೦.ಮಕರ:
ಉದ್ಯೋಗ ಸ್ಥಾನದಲ್ಲಿ ಹರ್ಷದ ವಾತಾವರಣ. ದೇವತಾ ಸನ್ನಿಧಿಗೆ ಸಂದರ್ಶನ.ಇಷ್ಟದೇವರ ಅನುಗ್ರಹದಿಂದ ಸಂಕಲ್ಪ ಸಿದ್ಧಿ. ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಚೆ ಮೀರಿದ ಲಾಭ. ಕೃಷಿಕಾರ್ಯದಲ್ಲಿ ತೊಡಗಿರುವವರಿಗೆ ಅನುಕೂಲದ ದಿನ. ಗಷೇಶ ಕವಚ, ದತ್ತ ಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಗಳಿಕೆಯ ಹೊಸ ಮಾರ್ಗಗಳಿಗಾಗಿ ಹುಡುಕಾಟ. ತಂದೆಯ ಊರಿನ ಬಂಧುಗಳ ಆಗಮನ. ಹತ್ತಿರದ ದೇವಾಲಯಕ್ಕೆ ಭೇಟಿ. ಧಾರ್ಮಿಕ ಸಂಸ್ಥೆಯ ಸದಸ್ಯರೊಂದಿಗೆ ಆಸ್ಪತ್ರೆ, ಅನಾಥಾಲಯಗಳಿಗೆ ಸಂದರ್ಶನ. ಸಮಾಜ ಸೇವೆಯ ಕಾರ್ಯಕ್ಷೇತ್ರ ವಿಸ್ತರಣೆಗೆ ಚಿಂತನೆ. ಗಣೇಶ ಕವಚ, ನರಸಿಂಹ ಕವಚ, ಶನಿಮಹಾತ್ಮೆ ಓದಿ.
೧೨. ಮೀನ:
ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ತಾಯಿಗೆ ಅಥವಾ ತಾಯಿಯ ಸ್ಥಾನದಲ್ಲಿರುವ ವ್ಯಕ್ತಿಗೆ ಗೌರವಾರ್ಪಣೆ. ಉದ್ಯೋಗ ಸ್ಥಾನದಲ್ಲಿರುವ ಸಹಯೋಗಿಗಳಿಗೆ ಸತ್ಕಾರ. ಗುರುಸನ್ನಿಧಿಗೆ ತೆರಳಲು ಸಿದ್ಧತೆ. ಧಾರ್ಮಿಕ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವ ಅವಕಾಶ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.