ಭಂಡಾರತ್ತಡ್ಕ ಸಾರಕೂಟೇಲು ಸತ್ಯನಾರಾಯಣ ಪೂಜಾ ಮಂಟಪಕ್ಕೆ ಶೀಟ್ ಅಳವಡಿಕೆಗೆ ಮುಹೂರ್ತ
Puttur: ಇಲ್ಲಿನ ಭಂಡಾರತ್ತಡ್ಕ ಸಾರಕೂಟೇಲು ಶ್ರೀ ನಾಗಬ್ರಹ್ಮ,ರಕ್ತೇಶ್ವರಿ, ಗುಳಿಗ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಸನ್ನಿಧಿಯಲ್ಲಿ, ಸತ್ಯನಾರಾಯಣ ಪೂಜಾ ಮಂಟಪದ ಮುಂಭಾಗಕ್ಕೆ ಮೇಲ್ಛಾವಣಿ ಮತ್ತು ಶೀಟ್ ಅಳವಡಿಕೆ ಕಾರ್ಯಕ್ಕೆ ಮುಹೂರ್ತ ನಡೆಯಿತು.
ಪುತ್ತೂರು: ಇಲ್ಲಿನ ಭಂಡಾರತ್ತಡ್ಕ ಸಾರಕೂಟೇಲು ಶ್ರೀ ನಾಗಬ್ರಹ್ಮ,ರಕ್ತೇಶ್ವರಿ, ಗುಳಿಗ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಸನ್ನಿಧಿಯಲ್ಲಿ, ಸತ್ಯನಾರಾಯಣ ಪೂಜಾ ಮಂಟಪದ ಮುಂಭಾಗಕ್ಕೆ ಮೇಲ್ಛಾವಣಿ ಮತ್ತು ಶೀಟ್ ಅಳವಡಿಕೆ ಕಾರ್ಯಕ್ಕೆ ಮುಹೂರ್ತ ನಡೆಯಿತು.
ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ, ಶಂಕರ ನಾರಾಯಣ ಪ್ರಸಾದ್ ಭಟ್ ಕಜೆ ಅವರು, ಮುಹೂರ್ತ ನೆರವೇರಿಸಿದರು.
ಪೂಜಾ ಸಮಿತಿಯ ಕೋಶಾಧಿಕಾರಿ ನಾಗೇಶ್ ಭಟ್ ಪಾದೆಕರ್ಯ, ಪೂಜಾ ಸಮಿತಿ ಮಾಜಿ ಅಧ್ಯಕ್ಷ ಗಣೇಶ್ ಕುಮಾರ್ ಭಟ್ ಪಾದೆಕರ್ಯ, ಉಪಾಧ್ಯಕ್ಷ ಸೀತಾರಾಮ ಮುಂಡೋಲೆ, ಹುಕ್ರಪ್ಪ ನಾಯ್ಕ ಸಾರಕೂಟೇಲು, ಸಂತೋಷ್ ಕುಮಾರ್ ಪಾದೆಕರ್ಯ, ಮಾಜಿ ಕೋಶಾಧಿಕಾರಿ ಸಂದೀಪ್ ಕುಮಾರ್ ಏರುಕೋಟ್ಯ ಹಾಗೂ ಮಿಥುನ್ ಪಾದೆಕರ್ಯ ಉಪಸ್ಥಿತರಿದ್ದರು.