ಪುತ್ತೂರು: ಬಿ.ಫಾರ್ಮಾ ವಿದ್ಯಾರ್ಥಿನಿಗೆ ಪುತ್ತಿಲ ಪರಿವಾರದಿಂದ ನೆರವು
Puttur: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಬಿ ಫಾರ್ಮಾ ವಿದ್ಯಾರ್ಥಿನಿಗೆ ಆರ್ಥಿಕ ನೆರವು ನೀಡಿದೆ.
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಬಿ ಫಾರ್ಮಾ ವಿದ್ಯಾರ್ಥಿನಿಗೆ ಆರ್ಥಿಕ ನೆರವು ನೀಡಿದೆ. ಹಿರೇಬಂಡಾಡಿಯ ನಂದಿನಿ ನಗರದ ನಿವಾಸಿ ಪ್ರಸಾದ್ ಭಟ್ ಹಾಗೂ ವೇದಾವತಿ ದಂಪತಿ ಪುತ್ರಿ ವರಲಕ್ಷ್ಮಿ ಅವರ ಕಾಲೇಜು ಶುಲ್ಕವನ್ನು (ರೂ.1,50,000) ಭರಿಸಿದೆ.
ಟ್ರಸ್ಟಿನ ಕೇಂದ್ರ ಕಚೇರಿಯಲ್ಲಿ ಸೋಮವಾರ ದಾನಿಗಳ ಸಹಕಾರದೊಂದಿಗೆ, ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ನಿರ್ದೇಶಕ ರಾಜು ಶೆಟ್ಟಿ, ರಾಜೇಶ್ ಬೊಳುವಾರು ಹಾಗೂ ಇನ್ನಿತರೇ ಪದಾಧಿಕಾರಿಗಳ ಸಮ್ಮುಖದಲ್ಲಿ ಸಹಾಯಧನವನ್ನು ನೀಡಲಾಗಿದೆ.