ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ‍್ಲಿ ʻವಿವೇಕ ಪ್ರದೀಪ್ತಿ-2026ʼ - ಪ್ರತಿಭಾ ಪುರಸ‍್ಕಾರ; 2025-26ನೇ ಸಾಲಿನ ಸಾಧಕ ವಿದ‍್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ

ಸ್ಪರ್ಧಾತ್ಮಕ ಪರೀಕ‍್ಷೆ ಹಾಗೂ ದ‍್ವಿತೀಯ ಪಿಯಸಿ ವಾರ್ಷಿಕ ಪರೀಕ‍್ಷೆಯಲ‍್ಲಿ ಉನ್ನತ ಶ್ರೇಣಿಯಲ‍್ಲಿ ತೇರ್ಗಡೆ ಹೊಂದಿದ ವಿದ‍್ಯಾರ್ಥಿಗಳಿಗೆ ಸನ‍್ಮಾನ, ದ‍್ವಿತೀಯ ಪಿಯಸಿಯಲ‍್ಲಿ ಪುತ್ತೂರು ತಾಲೂಕಿನಲ‍್ಲೇ ಅತ್ಯಂತ ಹೆಚ‍್ಚು ವಿದ‍್ಯಾರ್ಥಿಗಳು ದ‍್ವಿತೀಯ ಶ್ರೇಣಿಯಲ‍್ಲಿ ತೇರ್ಗಡೆ, ಸ್ಪರ್ಧಾತ್ಮಕ ಪರೀಕ‍್ಷೆಗಳಲ‍್ಲಿ ತಾಲೂಕಿನಲ‍್ಲಿ ಮೊದಲ ಸ‍್ಥಾನಗಳನ‍್ನು ಪಡೆದ ವಿವೇಕಾನಂದ ಪದವಿಪೂರ್ವ ಕಾಲೇಜು

Jul 21, 2026 - 23:38
ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ‍್ಲಿ ʻವಿವೇಕ ಪ್ರದೀಪ್ತಿ-2026ʼ - ಪ್ರತಿಭಾ ಪುರಸ‍್ಕಾರ; 2025-26ನೇ ಸಾಲಿನ ಸಾಧಕ ವಿದ‍್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ
Celebrating Excellence at Viveka Pradeepthi 2026

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ‍್ಲಿ ದ‍್ವಿತೀಯ ಪಿಯಸಿ ವಿದ‍್ಯಾರ್ಥಿಗಳ ಪ್ರತಿಭಾ ಪುರಸ‍್ಕಾರ ‘ವಿವೇಕ ಪ್ರದೀಪ‍್ತಿ– 2026’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದ ಮಖ್ಯ ಅತಿಥಿಗಳಾಗಿ ಭಾಗವಹಿಸಿದ

ಆದರ್ಶ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ರ‍್ತೀರೋಗ ತಜ‍್ಞೆ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ‍್ಯಾರ್ಥಿನಿ ಡಾ. ಅರ್ಚನಾ ಕಾವೇರಿ ಬಿ. ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯನ‍್ನು ಉಳಿಸಿಕೊಂಡು, ಬೆಳೆಸಿಕೊಂಡು ಶಿಕ್ಷಣವನ‍್ನು ನೀಡುವುದು ಅಷ‍್ಟು ಸುಲಭ ಸಾಧ್ಯವಲ್ಲ. ವಿವೇಕಾನಂದವಿದ‍್ಯಾಸಂಸ‍್ಥೆ ಇಂತಹದೊಂದು ಕಾರ್ಯವನ‍್ನು ಆರಂಭದಿಂದಲೂ ಮಾಡುತ್ತಿರುವುದು ಪ್ರಶಂಸನೀಯಹಾಗೂ ಗಮನಾರ್ಹ. ಜೀವನದಲ‍್ಲಿ ಮೇಲೇರಲು ಸತತಪರಿಶ್ರಮದ ಅಗತ್ಯವಿದೆ. ಪಠ್ಯದೊಂದಿಗೆ ಪಠ‍್ಯೇತರ ಚಟುವಟಿಕೆಗಳಲ‍್ಲಿ ತೊಡಗಿಸಿಕೊಂಡಾಗ ವ್ಯಕ್ತಿತ್ವ ಇನ್ನಷ‍್ಟು ಪ್ರಜ್ವಲಿಸಬಲ್ಲದು. ವಿದ‍್ಯಾರ್ಥಿಗಳು ತಮಗೆ ಲಭ್ಯವಾಗುವ ಅವಕಾಶಗಳನ‍್ನು ಬಳಸಿಕೊಳ‍್ಳುತ‍್ತಾಹೋದಲ‍್ಲಿ ಮತ‍್ತು ಹೆತ್ತವರ ಶ್ರಮಕ‍್ಕೆ ತಮ್ಮ ಶ್ರಮವನ‍್ನು ಧಾರೆ ಎರೆದಾಗ ಮಾತ್ರವೇ ಸಮಾಜದಲ‍್ಲಿ ಉತ್ತಮ ಬದುಕನ‍್ನು ರೂಪಿಸಿಕೊಳ್ಳಲು ಸಾಧ್ಯ ಎಂದು ನುಡಿದರು.

 ಇನ‍್ನೋರ್ವ ಮಖ್ಯ ಅತಿಥಿಯಾಗಿದ್ದ ಯೇನಪೋಯ ಮೆಡಿಕಲ್‌ ಕಾಲೇಜಿನ ಮನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ‍್ಯಾಪಕರು ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ‍್ಯಾರ್ಥಿ ಡಾ.ರಾಜೇಶ್ ಎಂ. ಮಾತನಾಡುತ‍್ತಾ, ಸಾಧನೆ ಎಂಬುದು ಒಂದೇ ದಿನದಲ‍್ಲಿ ದೊರೆಯವುದಿಲ್ಲ. ಅದರ ಹಿಂದೆ ನಿರಂತರ ಪರಿಶ್ರಮ, ತಾಳ್ಮೆ, ಆತ್ಮವಿಶ‍್ವಾಸ ಮತ‍್ತುದೃಢ ಸಂಕಲ್ಪ ಅಡಗಿರುತ್ತದೆ. ಪ್ರತಿಯೊಂದು ಸಾಧನೆಯ ಹಿಂದೆ ಅನೇಕ ಸವಾಲುಗಳು ಮತ‍್ತು ಕೆಲವೊಮ‍್ಮೆ ವೈಫಲ್ಯಗಳು ಇರುತ್ತದೆ. ಆದರೆ ವೈಫಲ್ಯ ಅಂತ್ಯವಲ್ಲ. ಅದು ಯಶಸ‍್ಸಿನ ಮೆಟ‍್ಟಿಲು. ವೈಫಲ್ಯದಿಂದ ಪಾಠ ಕಲಿತು ಕಠಿಣ ಪರಿಶ್ರಮ, ನಿರಂತರತೆ ಮತ‍್ತು ಶಿಸ್ತನ‍್ನು ಕೈಬಿಡದೆ ಮನ್ನಡೆಯವವರೇ ನಿಜವಾದ ಯಶಸ್ಸನ‍್ನು ಜೀವನದಲ‍್ಲಿ ಕಾಣುತ್ತಾರೆ ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ. ಮಾತನಾಡಿ, ಪುತ್ತೂರು ತಾಲೂಕಿನಲ‍್ಲೇ ಅತ್ಯಂತ ಹೆಚ‍್ಚು ವಿಶಿಷ್ಟ ಶ್ರೇಣಿಯ ಫಲಿತಾಂಶವನ‍್ನು ಪಡೆಯವುದರೊಂದಿಗೆ ಸ್ಪರ್ಧಾತ್ಮಕ ಪರೀಕ‍್ಷಾ ಫಲಿತಾಂಶಗಳಲ‍್ಲಿ ಮೊದಲಿಗರೆಂಬ ಹೆಮ‍್ಮೆ ನಮಗಿದೆ. ಫಲಿತಾಂಶದ ಜೊತೆಗೆ ಕ್ರೀಡೆ ಹಾಗೂ ಇತರ ಕ‍್ಷೇತ್ರಗಳಲ‍್ಲಿ ನಮ್ಮ ವಿದ‍್ಯಾರ್ಥಿಗಳ ಸಾಧನೆ ಗಮನಾರ್ಹವಾಗಿದೆ. ನಮ್ಮ ವಿದ‍್ಯಾರ್ಥಿಗಳು ಮೌಲ್ಯಯತ ಸಮಾಜದ ನಿರ್ಮಾಣದಲ‍್ಲಿ ಮನ್ನಡೆಯತ್ತಾರೆ ಎಂಬ ಭರವಸೆ ನಮ್ಮದು ಎಂದು ಹೇಳಿದರು.

 ಕಾರ್ಯಕ್ರಮದಲ‍್ಲಿ ಮಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಾಧಕ ಹಿರಿಯ ವಿದ‍್ಯಾರ್ಥಿಗಳಾದ ಡಾ. ಅರ್ಚನಾ ಕಾವೇರಿ ಬಿ. ಹಾಗೂ ಡಾ. ರಾಜೇಶ್ ಎಂ. ಅವರನ‍್ನು ಕಾಲೇಜಿನ ವತಿಯಿಂದ ಸನ‍್ಮಾನಿಸಲಾಯಿತು. ಈ ಸಂದರ್ಭದಲ‍್ಲಿ ದ‍್ವಿತೀಯ ಪಿಯಸಿ ವಾರ್ಷಿಕ ಪರೀಕ‍್ಷೆಯಲ‍್ಲಿ ಉನ್ನತ ಶ್ರೇಣಿಯಲ‍್ಲಿ ತೇರ್ಗಡೆ ಹೊಂದಿದ 458 ವಿದ‍್ಯಾರ್ಥಿಗಳು ಹಾಗೂ ಸಿ.ಇ.ಟಿ., ಜೆ.ಇ.ಇ., ನೀಟ್, ಸಿ.ಎ., ಸಿ.ಎಸ್.ಇ.ಇ.ಟಿ. ಪರೀಕ‍್ಷೆಗಳಲ‍್ಲಿ ಅತ‍್ಯುನ್ನತ ಸಾಧನೆ ಮಾಡಿದ ವಿದ‍್ಯಾರ್ಥಿಗಳನ‍್ನು ಸನ‍್ಮಾನಿಸಲಾಯಿತು.

ಕಾರ್ಯಕ್ರಮದಲ‍್ಲಿ ಉಪನ‍್ಯಾಸಕ, ಉಪನ‍್ಯಾಸಕೇತರ ವೃಂದ, ಸನ‍್ಮಾನಿತ ವಿದ‍್ಯಾರ್ಥಿಗಳು ಹಾಗೂ ಪೋಷಕರು ಪಾಲ‍್ಗೊಂಡರು. ದ‍್ವಿತೀಯ ಪಿಯಸಿ ವಿದ‍್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಂಶುಪಾಲರಾದ ದೇವಿಚರಣ್ ರೈ ಎಂ. ಸ‍್ವಾಗತಿಸಿ, ಉಪನ‍್ಯಾಸಕಿ ರಂಜಿನಿ ವಿ. ಕಾರ್ಯಕ್ರಮವನ‍್ನು ನಿರೂಪಿಸಿ, ಉಪನ‍್ಯಾಸಕರಾದ ಪರಮೇಶ್ವರ ಶರ್ಮ ಪಿ .ಕೆ. ವಂದಿಸಿದರು.