ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ಗೆ ನೂತನ ಪದಾಧಿಕಾರಿಗಳ ಆಯ್ಕೆ
Puttur: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಪುತ್ತೂರು: ಇಲ್ಲಿನ ಸುಭದ್ರ ಸಭಾಂಗಣದಲ್ಲಿ 'ಪುತ್ತಿಲ ಪರಿವಾರ ಸೇವಾ ಟ್ರಸ್ಟ್'ಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಈಚೆಗೆ, ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಟ್ರಸ್ಟ್ನ ಅಧ್ಯಕ್ಷರಾಗಿ ರಾಮ್ ಭಟ್ ಪಾತಾಳ ಅವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಪ್ರಜ್ವಲ್ ಘಾಟೆ, ಹರೀಶ್ ಮರುವಾಳ ಹಾಗೂ ಕೋಶಾಧಿಕಾರಿಯಾಗಿ ಸುಜಿತ್ ಕಜೆ ಅವರುಗಳನ್ನು ನೇಮಿಸಲಾಯಿತು.

ಗ್ರಾಮಾಂತರ ಮಂಡಲದ ಸಂಘಟನಾ ಕಾರ್ಯದರ್ಶಿಯಾಗಿ ಉಮೇಶ್ ಗೌಡ ಕೋಡಿಬೈಲು ಮತ್ತು ಪ್ರಶಾಂತ್ ನೆಕ್ಕಿಲಾಡಿ, ನಗರ ಮಂಡಲದ ಸಂಘಟನಾ ಕಾರ್ಯದರ್ಶಿಯಾಗಿ ಕೆ.ಅನಿಲ್ ತೆಂಕಿಲ & ಮನೀಶ್ ಕುಲಾಲ್, ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಕಣ್ಣಾರ್ನುಜಿ, ಪ್ರವೀಣ್ ಶೆಟ್ಟಿ ತಿಂಗಳಾಡಿ, ನವೀನ್ ರೈ ಎಸ್, ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಹರೀಶ್ ಭಟ್ ಪುಣಚ ಹಾಗೂ ಜಯರಾಮ್ ಪೂಜಾರಿ ಒತ್ತೆ ಮುಂಡೂರು ಅವರನ್ನು ನೇಮಕ ಮಾಡಲಾಯಿತು.
ಕಾರ್ಯದರ್ಶಿಯಾಗಿ ಪ್ರಕಾಶ್ ಕೆಮ್ಮಾಯಿ, ಪದ್ಮನಾಭ ಗೌಡ, ಮಹಾಬಲ ಕೆಮ್ಮಾಯಿ, ಚಂದ್ರಶೇಖರ ಜಿಡೆಕಲ್ಲು, ಅನಂತ ಪ್ರಸಾದ್ ವಿಟ್ಲ, ಶೇಖರ್ ರಾಗಿದಕುಮೇರ್, ನಿರ್ದೇಶಕರಾಗಿ ಪ್ರೇಮ್ ರಾಜ್ ಆರ್ಲಪದವು, ರೂಪೇಶ್ ನಾಯ್ಕ್, ಮಹೇಂದ್ರ ವರ್ಮ, ಗಣೇಶ್ಚಂದ್ರ ಭಟ್ ಮಕರಂದ, ರವಿಕುಮಾರ್ ರೈ ಕೆದಂಬಾಡಿ ಮಠ, ರಾಜು ಶೆಟ್ಟಿ ಕೆಮ್ಮಾಯಿ ಮತ್ತು 65ಕ್ಕೂ ಹೆಚ್ಚು ಸದಸ್ಯರನ್ನು ಈ ವೇಳೆ ಆಯ್ಕೆ ಮಾಡಲಾಯಿತು.