ಪುತ್ತೂರು:ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ

Jul 21, 2026 - 21:31
ಪುತ್ತೂರು:ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

ಪುತ್ತೂರು: ಮಾದಕ ದ್ರವ್ಯಗಳ ದುರುಪಯೋಗ ಮತ‍್ತು ಅಕ್ರಮ ಸಾಗಣೆ ವಿರುದ್ಧದ ಅಂತರಾಷ್ಟ್ರೀಯ ದಿನ 2026 ರ ಅಂಗವಾಗಿ ದಕ‍್ಷಿಣ ಕನ್ನಡ ಜಿಲ‍್ಲಾ ಪೊಲೀಸ್, ಪುತ‍್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ‍್ತು ಹಾಗೂ ರೋಟರಿ ಕ್ಲಬ್‌ ಪುತ‍್ತೂರು ಇದರ ಜಂಟಿ ಆಶ್ರಯದಲ‍್ಲಿ ವಿದ‍್ಯಾರ್ಥಿಗಳಲ‍್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉ  ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 10ನೇ ತರಗತಿ ಬೃಂದಾ ಆರ್.ಕೆ (ಕೆಮ‍್ಮಿಂಜೆ ರಮೇಶ್ ಕೆ ಹಾಗೂ ಶೋಭಾ ಬಿ ಯವರ ಪುತ್ರಿ)  ದ‍್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ಹಾಗೆಯೇ, 9ನೇ ತರಗತಿ ಮಾನ‍್ವಿ ಶೆಟ‍್ಟಿ (ಕೋಡಿಂಬಾಡಿ ಸುರೇಶ್ ಶೆಟ‍್ಟಿ ಹಾಗೂ ಪವಿತ್ರ ಎಂ ದಂಪತಿ ಪುತ್ರಿ) ತೃತೀಯ ಬಹುಮಾನ ಹಾಗೂ 10ನೇ ತರಗತಿ ಕೆ. ಆದಿತ್ಯ ಭಂಡಾರ್ಕರ್ (ನೆಲ‍್ಲಿಕಟ‍್ಟೆ ಕೆ ಅವಿನಾಶ್ ಭಂಡಾರ್ಕರ್ ಮತ‍್ತು ಅಕ್ಷತಾ ಭಂಡಾರ್ಕರ್ ದಂಪತಿ ಪುತ್ರ) ಪೋತ‍್ಸಾಹಕ ಬಹುಮಾನ ಮತ‍್ತು ಪ್ರಶಂಸಾ ಪತ್ರವನ‍್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಬಹುಮಾನ ಪಡೆದಿರುವ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ಹೇಮನಾಥ ಶೆಟ‍್ಟಿ ಕಾವು ಹಾಗೂ ಪ್ರಭಾರ ಮಖ‍್ಯೋಪಾಧ‍್ಯಾಯಿನಿಯಾದ ಗಾಯತ್ರಿ ಎಸ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಅಭಿನಂದನೆ ಸಲ‍್ಲಿಸಿದ್ದಾರೆ.