ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲದ ಇಂಗ್ಲಿಷ್ ವಿಭಾಗ, ಲಿಟರರಿ ಕ್ಲಬ್ ಮತ್ತು ಐಕ್ಯೂಎಸಿ ಘಟಕದ ಸಂಯುಕ್ತಾಶ್ರಯದಲ್ಲಿ 'ಫ್ರಮ್ ಪೇಜಸ್ ಟು ಪಿಕ್ಸೆಲ್ಸ್' ಕಾರ್ಯಕ್ರಮ ನಡೆಯಿತು. ಈ ವೇಳೆ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಶ್ರೀಹರಿ ಶರ್ಮ ರಚಿಸಿದ ನೂತನ ಬ್ಲಾಗ್ ಲೋಕಾರ್ಪಣೆಗೊಳಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. 'ಸಾಹಿತ್ಯವು ಇಷ್ಟು ದಿನ ಕೇವಲ ಪುಸ್ತಕಗಳಿಗಷ್ಟೇ ಸೀಮಿತವಾಗಿತ್ತು. ಆದರೆ, ಇಂಗ್ಲಿಷ್ ವಿಭಾಗದಿಂದ ರೂಪಿಸಿರುವ ಈ ನೂತನ ಡಿಜಿಟಲ್ ವೇದಿಕೆಯು ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಬರವಣಿಗೆಯ ಕೌಶಲ್ಯವನ್ನು ಹೊರಹಾಕಲು ಸಿಕ್ಕಿರುವ ಸುವರ್ಣಾವಕಾಶ. ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಕಥೆ, ಕವನಗಳನ್ನು ಬರೆಯುವ ಮೂಲಕ ಈ ಬ್ಲಾಗ್ನ ಬೆಳವಣಿಗೆಗೆ ಕೈಜೋಡಿಸಬೇಕು' ಎಂದು ಹೇಳಿದರು.
ಆಂಗ್ಲ ವಿಭಾಗ ಮುಖ್ಯಸ್ಥ ಬಾಲಕೃಷ್ಣ ಹೆಚ್, ಲಿಟರರಿ ಕ್ಲಬ್ನ ಅಧ್ಯಕ್ಷೆ ಸುಮಶ್ರೀ.ಪಿ, ಸದಸ್ಯೆ ಶ್ರೀರಕ್ಷಾ, ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಎಸ್.ಗೀತಿಕಾ ಸ್ವಾಗತಿಸಿದರು. ವಿದ್ಯಾಶ್ರೀ ವಂದಿಸಿದರು. ವಾಣಿಶ್ರೀ ಡಿ.ಆರ್ ನಿರೂಪಿಸಿದರು.