ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಜಿಲ್ಲಾಧಿಕಾರಿ ಮನವಿ
Dakshina Kannada: ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರು ಮನವಿ ಮಾಡಿದ್ದಾರೆ.
ಮಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ, ಎಸ್ಐಆರ್ ಫಾರಂ ಭರ್ತಿ ಪ್ರಕ್ರಿಯೆಯು ಬಿಎಲ್ಒಗಳ ಮೂಲಕ ನಡೆಯುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿಲ್ಲ.
ಯಾರೆಲ್ಲ ಫಾರಂ ಪಡೆದಿದ್ದಾರೆಯೋ ಅಥವಾ ಪಡೆಯುವುದಕ್ಕೆ ಬಾಕಿ ಇದೆಯೋ ಅಂಥವರು ಆದಷ್ಟು ಬೇಗ ಅವುಗಳನ್ನು ಭರ್ತಿ ಮಾಡಿ, ಸಲ್ಲಿಕೆ ಮಾಡಬೇಕು. ಇದರೊಂದಿಗೆ ಈ ಪ್ರಕ್ರಿಯೆಗೆ ಪೂರ್ಣ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ದರ್ಶನ್ ಅವರು, ಜಿಲ್ಲೆಯ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಸದ್ಯ, ರಾಜ್ಯಾದ್ಯಂತ 5.15 ಕೋಟಿ ಎಸ್ಐಆರ್ ಫಾರಂಗಳನ್ನು ವಿತರಿಸಲಾಗಿದ್ದು, ಶೇಕಡ 92.95% ಪ್ರಗತಿ ಸಾಧಿಸಲಾಗಿದೆ. ಬರೋಬ್ಬರಿ 1.44 ಕೋಟಿ ಅರ್ಜಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ.
ಜುಲೈ 29 ಎಸ್ಐಆರ್ ಫಾರಂಗಳನ್ನು ವಿತರಿಸಿ, ಮಾಹಿತಿ ಪಡೆಯಲು ಕಡೆಯ ದಿನವಾಗಿದೆ. ಅಕ್ಟೋಬರ್ 7 ರಂದು ಅಂತಿಮ ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.


