ಪುತ್ತೂರು: ಜುಲೈ 26ರಂದು ಬೆಟ್ಟಂಪಾಡಿಯ ಮಹಾಲಿಂಗೇಶ್ವರ ದೇಗುಲದಲ್ಲಿ ಮೃತ್ಯುಂಜಯ ಹೋಮ

Bettampady Mahalingeshwara Temple: ಜುಲೈ 26 ಭಾನುವಾರದಂದು ಲೋಕಕಲ್ಯಾಣಾರ್ಥವಾಗಿ ಮೃತ್ಯುಂಜಯ ಹೋಮ ನಡೆಯಲಿದೆ.

Jul 21, 2026 - 16:52
Jul 21, 2026 - 17:00
ಪುತ್ತೂರು: ಜುಲೈ 26ರಂದು ಬೆಟ್ಟಂಪಾಡಿಯ ಮಹಾಲಿಂಗೇಶ್ವರ ದೇಗುಲದಲ್ಲಿ ಮೃತ್ಯುಂಜಯ ಹೋಮ

ಪುತ್ತೂರು: ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಜುಲೈ 26 ಭಾನುವಾರದಂದು ಲೋಕಕಲ್ಯಾಣಾರ್ಥವಾಗಿ ಮೃತ್ಯುಂಜಯ ಹೋಮ ಹಾಗೂ ಭಕ್ತರಿಂದ ಲಕ್ಷ ಶಿವ ಪಂಚಾಕ್ಷರಿ ಮಂತ್ರ ಪಠಣ ಯಜ್ಞ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆ ಪೂಜಾ ಕಾರ್ಯಕ್ರಮಗಳು ಶುರುವಾಗಲಿವೆ.

ಪರಮಶಿವನಿಗೆ ಅತ್ಯಂತ ಪ್ರಿಯವಾದ ಈ ಹೋಮವು ಮೃತ್ಯುವನ್ನು ಜಯಿಸುವ ಸಂಕೇತವಾಗಿದೆ. ಧೈರ್ಯ, ಭಕ್ತಿ, ಆರೋಗ್ಯ, ಸ್ಥಿರ ಮನಸ್ಸು ಹಾಗೂ ಮನಃಶಾಂತಿಯನ್ನು ನೀಡುತ್ತದೆ. ಇದು ಕೇವಲ ವೈಯಕ್ತಿಕ ಕ್ಷೇಮಕ್ಕಲ್ಲ. ಬದಲಾಗಿ ಕುಟುಂಬದ ಸುಖ-ಶಾಂತಿ, ಸಮಾಜದ ಐಕ್ಯತೆ ಹಾಗೂ ದೇಶದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆಯಾಗಿದೆ. 

ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವು ಪರಮಶಿವನ ಹೃದಯ ಮಂತ್ರ. 'ನ ಮ ಶಿ ವಾ ಯ' ಎಂಬ ಐದು ಅಕ್ಷರಗಳು ಪಂಚಭೂತಗಳ ಸಂಕೇತ, ಮನಸ್ಸನ್ನು ಶುದ್ಧಿಗೊಳಿಸಿ ಅಹಂಕಾರವನ್ನು ಕರಗಿಸಿ, ಭಕ್ತಿಯನ್ನು ಬೆಳೆಸುತ್ತದೆ. 

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಆಗಮಿಸಿ, ಹೋಮದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಆಡಳಿತ ಮಂಡಳಿಯು ಕೋರಿದೆ.