ಈ ದಿನದ ರಾಶಿ ಭವಿಷ್ಯ-

ದಿನಾಂಕ -05-06-2025

Jun 5, 2025 - 15:00
ಈ ದಿನದ ರಾಶಿ ಭವಿಷ್ಯ-

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ  5

೧. ಮೇಷ:
ಶನಿಮಹಾತ್ಮನ ಮಹಿಮೆಯಿಂದ ಯೋಚನೆಗಳು ಅಸ್ಪಷ್ಟವಾಗುವ ಸಾಧ್ಯತೆ. ಉದ್ಯೋಗ, ವ್ಯವಹಾರಗಳಲ್ಲಿ ಮಹತ್ವದ  ದಿನ. ಆರ್ಥಿಕ ಸಂಸ್ಥೆ ನೌಕರರಿಗೆ ಅಧಿಕ ಹೊರೆ. ಅಪರೂಪದ  ಬಂಧುಗಳ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ‌.ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.


೨. ವೃಷಭ:
 ಮೊದಲಿಗಿಂತ ಹೆಚ್ಚು ಅನುಕೂಲದ ಪರಿಸ್ಥಿತಿ..
ಹಣಕಾಸು ವ್ಯವಹಾರ ಸುಗಮ.ರಕ್ಷಣಾ ವಿಭಾಗ ದವರಿಗೆ ಸತ್ವಪರೀಕ್ಷೆಯ ಕ್ಷಣಗಳು. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಮಾರಾಟ ಹೆಚ್ಚಳ. ಗಣೇಶ ದ್ವಾದಶನಾಮ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೩ಮಿಥುನ:
ಪ್ರಾಪಂಚಿಕ  ದೃಷ್ಟಿಯಿಂದ ಶುಭಕಾಲ.
ಶಾರೀರಿಕ ತೊಂದರೆಗಳಿಗೆ ವಿದಾಯ. ಕಾರ್ಯ ನಿರ್ವಹಣೆ  ನಿರಾತಂಕವಾಗಿ ನೆಮ್ಮದಿ. ವ್ಯವಹಾರಸ್ಥರಿಗೆ ಅನುಕೂಲದ ದಿನ. ಭಗವತ್ಕೃಪೆ ಪ್ರಾಪ್ತಿಗೆ ವಿಶೇಷ ಸಾಧನೆ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೪. ಕರ್ಕಾಟಕ:

ಕಡಿಮೆಯಾದ ಅಶುಭಫಲಗಳು..
 ಉದ್ಯೋಗಸ್ಥರಿಗೆ   ನೆಮ್ಮದಿಯ ವಾತಾವರಣ. ಪಾಲುದಾರಿಕೆ ವ್ಯವಹಾರ ಸುಧಾರಣೆ. ಭೂವ್ಯವಹಾರದಲ್ಲಿ ಪ್ರಾಮಾಣಿಕ ನಡೆಯಿಂದ  ಲಾಭ. ವ್ಯವಹಾರ ಸಂಬಂಧ ಉತ್ತರಕ್ಕೆ  ಪ್ರಯಾಣ. ಗಣೇಶ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
 


೫.ಸಿಂಹ:
 ಹಂಚಿಕೊಂಡಷ್ಟೂ ವೃದ್ಧಿಯಾಗುವ ಆನಂದ. ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮೀ ಕಟಾಕ್ಷ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ  ಯಶಸ್ಸು. ಊರಿನ ವಿಷ್ಣು ಆಲಯಕ್ಕೆ ಭೇಟಿ.ಸಂಕಷ್ಟನಾಶನ ಗಣೇಶ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

,೬. ಕನ್ಯಾ:

ಅಗೋಚರ  ಮೂಲದಿಂದ  ಧನಪ್ರಾಪ್ತಿ.   ಉದ್ಯೋಗಸ್ಥರಿಗೆ , ಸಹೋದ್ಯೋಗಿಗಳ ಸಹಾಯ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ.  ಕೊಟ್ಟು ಮರೆತಿದ್ದ ಸಾಲ ಮರಳಿ ಕೈಗೆ. ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲ ಸೃಷ್ಟಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೭. ತುಲಾ

ಬಹಳ ನಿರೀಕ್ಷಿಸಿ ನಿರಾಶರಾಗಿದ್ದ ಸಹಾಯ ಲಭ್ಯ.
 ಉದ್ಯೋಗ ಕ್ಷೇತ್ರದಲ್ಲಿ ಬದಲಾದ ಕಾರ್ಯಗಳು. ನಿವೇಶನ, ಮನೆ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಅನುಕೂಲ. ಕೃಷಿ ಉತ್ಪನ್ನ ಮಾರಾಟಗಾರರಿಗೆ  ತೃಪ್ತಿಕರ  ಲಾಭ. ಹಿರಿಯರಿಗೆ ಉಲ್ಲಾಸದ  ವಾತಾವರಣ. ಗಣಪತಿ ಅಥರ್ವಶೀರ್ಷ, ವೆಂಕಟೇಶ್ವರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.


೮.ವೃಶ್ಚಿಕ:
ಕಾರ್ಯಗಳು ನಿರೀಕ್ಷೆಯಂತೆ ಕೈಗೂಡುವ ದಿನ. ಮಾಲಿಕ- ನೌಕರರ ಬಾಂಧವ್ಯ ವೃದ್ಧಿ. ಆಸ್ತಿ, ಮನೆ ದಳ್ಳಾಳಿಗಳಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ  ಹೆಚ್ಚು ಲಾಭ ಇಲ್ಲ.  ಗಿರವಿ ವ್ಯವಹಾರಸ್ಥರಿಗೆ ವಸೂಲಿಯ ಸಮಸ್ಯೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೯.ಧನು:
ನಿಸ್ವಾರ್ಥ ಮನೋಭಾವದ  ದುಡಿಮೆಗೆ ಶುಭಫಲ.
 ಹೊಂದಾಣಿಕೆ,  ಕಾರ್ಯನಿಷ್ಠೆಗಳಿಂದ  ಯಶಸ್ಸು. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಮಕ್ಕಳ ಪ್ರತಿಭೆ ವಿಕಾಸಕ್ಕೆ ವ್ಯವಸ್ಥೆ. ಕುಟುಂಬದ ಆಸ್ತಿ ವಿವಾದ ಸಂಧಾನದಲ್ಲಿ ಪರಿಹಾರ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೧೦.ಮಕರ:
ಮಾತು, ನಡಿಗೆ ಎರಡೂ ನಿಧಾನವಾಗಿರಲಿ.
ಉದ್ಯೋಗ ಸ್ಥಾನದಲ್ಲಿ ಅನುಕೂಲ ವೃದ್ಧಿ.ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ.  ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ. ಗಣೇಶ ಅಷ್ಟಕ, ವೆಂಕಟೇಶ್ವರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.


೧೧. ಕುಂಭ:
ಸವಾಲುಗಳು ಹೆಚ್ಚಾದಷ್ಟೂ ನಿಭಾಯಿಸುವ ಸಾಮರ್ಥ್ಯ. ಸಾಮಾಜಿಕ ಚಟುವಟಿಕೆಗಳ ಒತ್ತಡ. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಅವಿಶ್ರಾಂತ  ಚಟುವಟಿಕೆಗಳಿಂದ ಆಯಾಸ. ಗೃಹೋದ್ಯಮಗಳ ಆದಾಯ ವೃದ್ಧಿ.ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

೧೨. ಮೀನ:
ಇನ್ನಷ್ಟು ಹೊಣೆಗಾರಿಕೆಗಳನ್ನು ನಿರೀಕ್ಷಿಸಿರಿ. ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ. ಸ್ವಂತದ  ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯಿಂದ ವ್ಯವಹಾರದಲ್ಲಿ ಉತ್ತಮ ಸಹಕಾರ. ಹೊಸ ವ್ಯವಹಾರದಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.