ದಿನ ಭವಿಷ್ಯ

06-09-2025

Sep 6, 2025 - 14:26
Sep 5, 2025 - 16:34
ದಿನ ಭವಿಷ್ಯ

                 ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ  6

೧.ಮೇಷ:

ವ್ಯವಹಾರ ಸಂಬಂಧ ತಿರುಗಾಟ. ಬೌದ್ಧಿಕ ವ್ಯವಹಾರದಲ್ಲಿ ಕೀರ್ತಿ. ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸು.ಆಪ್ತರಿಂದ ಅಯಾಚಿತ ನೆರವು ಲಭ್ಯ.ಗೃಹಿಣಿಯರ  ವ್ಯವಹಾರ ಪ್ರತಿಭೆಗೆ ಉತ್ತೇಜನ. ಗಣೇಶ ಕವಚ, ವೆಂಕಟೇಶ್ವರ ಸ್ತೋತ್ರ, ಶನಿಮಹಾತ್ಮೆ ಓದಿ.

೨.ವೃಷಭ:

  ಕೌಟುಂಬಿಕ ಒತ್ತಡವಿದ್ದರೂ ನೆಮ್ಮದಿ. ಉದ್ಯೋಗದಲ್ಲಿ ಹೆಚ್ಚು ಸಂತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉತ್ಪನ್ನಗಳ ವೈವಿಧ್ಯ ಕಾಯ್ದುಕೊಳ್ಳಲು ಮೇಲಾಟ. ಉಳಿತಾಯ ಯೋಜನೆ ಏಜೆಂಟರಿಗೆ ಸುದಿನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೩. ಮಿಥುನ:

  ಸ್ನೇಹದ ದುರುಪಯೋಗ ಆಗದಂತೆ ನೋಡಿಕೊಳ್ಳಿ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ. ಉದ್ಯಮಿಗಳಿಗೆ ಪ್ರಾಮಾಣಿಕತೆ ಕಾಯ್ದುಕೊಳ್ಳಲು ಸವಾಲು.  ಅಸ್ವಸ್ಥರಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ. ಗೆಳೆಯನಿಗೆ ಅಪವಾದದಿಂದ ಮುಕ್ತಿ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಶನಿಸ್ತೋತ್ರ ಓದಿ.


೪.ಕರ್ಕಾಟಕ:

  ಉದ್ಯೋಗದಲ್ಲಿ ಯಥಾಸ್ಥಿತಿ.  ಉದ್ಯಮದ ಉತ್ಪಾದನೆಗಳ ಗುಣಮಟ್ಟ  ಕಾಯ್ದುಕೊಳ್ಳುವ ಪ್ರಯತ್ನ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ.  ಕುಟುಂಬದಲ್ಲಿ ಹರ್ಷ, ಉತ್ಸಾಹದ ವಾತಾವರಣ. ಕಳಪೆ ವಸ್ತು ಮಾರಾಟಗಾರರಿಂದ ದೂರವಿರಿ. ಸಂಕಷ್ಟನಾಶನ ಗಣೇಶ ಸ್ತೋತ್ರ,   ದಾರಿದ್ರ್ಯದಹನ ಶಿವಸ್ತೋತ್ರ, ಗುರುಸ್ತೋತ್ರ ಓದಿ.


೫_ಸಿಂಹ:

 ದುಡಿತ ಹೆಚ್ಚಿದಷ್ಟೂ ಬೆಳೆಯುವ ಕ್ರಿಯಾಶಕ್ತಿ.  ವ್ಯಾಪಾರ ವೃದ್ಧಿಗೆ ಹೊಸ ಪರಿಚಯಸ್ಥರ ಸಹಾಯ. ಕಟ್ಟಡ ನಿರ್ಮಾಣ ವ್ಯವಹಾರ ವೇಗವೃದ್ಧಿ. ಭೂವ್ಯವಹಾರ ನಡೆಸುವವರಿಗೆ ಅನುಕೂಲ.ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. 
ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಲಕ್ಷ್ಮೀ ಸ್ತೋತ್ರ ಓದಿ.

೬.ಕನ್ಯಾ:

 ಮನೆಯಲ್ಲಿ ಶಾಂತಿ,ಸಮಾಧಾನದ ಕ್ಷಣಗಳು.  ಆತ್ಮೀಯರ ಭೇಟಿಯಿಂದ ಹರ್ಷ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಶುಭದಿನ. ಗಣೇಶ  ಅಷ್ಟೋತ್ತರ ಶತನಾಮ ಸ್ತೋತ್ರ, ಕಾರ್ತಿಕೇಯ ಸ್ನೋತ್ರ ಓದಿ.


೭ತುಲಾ:

 ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ ಸುಧಾರಣೆ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ.  ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಕೀರ್ತನೆ, ಭಜನೆಯಿಂದ ಸಮಾಧಾನ‌. ಗಣೇಶ ಕವಚ, ಶಿವ ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ


೮.ವೃಶ್ಚಿಕ:

 ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಮಿತಿ ಇರಲಿ.  ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮದ ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ವದಂತಿಗಳನ್ನು ನಂಬದಿರಿ. ದೇವಿಯ ಆಲಯಕ್ಕೆ ಭೇಟಿ. ಗಷಪತಿ ಅಥರ್ವಶೀರ್ಷ, ಶಿವಕವಚ, ನವಗ್ರಹ ಮಂಗಲಾಷ್ಟಕ ಓದಿ.

೯. ಧನು:

ಅಮಾಯಕರ ಮೇಲೆ ಅಪವಾದ ಹೇರುವ ಯತ್ನ. ಉದ್ಯೋಗ ಸ್ಥಾನದಲ್ಲಿ ಗೌರವ. ಸಣ್ಣ ಪ್ರಮಾಣದ  ಉದ್ಯಮಗಳಿಗೆ ಅನುಕೂಲ. ಹೈನುಗಾರಿಕೆ, ಜೇನು ವ್ಯವಸಾಯ ಫಲಪ್ರದ. ಲಘು ವ್ಯಾಯಾಮದಿಂದ ಆರೋಗ್ಯ ಸುಧಾರಣೆ. ಗಣೇಶ ಅಷ್ಟಕ, ದೇವೀ ಕವಚ, ಋಣಮೋಚಕ ಮಂಗಲಸ್ತೋತ್ರ ಓದಿ.


೧೦. ಮಕರ:
 ಕೆಲಸದ ಒತ್ತಡ ಕೊಂಚ ಸಡಿಲು. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.  ಕೃಷ್ಯುತ್ಪನ್ನಗಳಿಗೆ ಒಳ್ಳೆಯ  ಬೇಡಿಕೆ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಆಪ್ತ ಸಲಹೆಗಾರರ ಭೇಟಿ ಸಂಭವ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

 ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ ಸಹಕಾರ. ಬಂಧುವರ್ಗದಲ್ಲಿ ವಿವಾಹ ಮಾತುಕತೆ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ದೀರ್ಘ ಕಾಲದ ಚಿಂತೆಯೊಂದರಿಂದ ವಿಮೋಚನೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

೧೨.ಮೀನ:

 ಮಿಶ್ರಫಲಗಳ ದಿನವಾದರೂ ಅನುಕೂಲವೇ ಹೆಚ್ಚು. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ.ಸಹವರ್ತಿಯ ವ್ಯವಹಾರ ಸುಧಾರಣೆಗೆ ಮಾರ್ಗದರ್ಶನ. ಕೌಟುಂಬಿಕ ರಂಗದಲ್ಲಿ ನಿರಾತಂಕದ ವಾತಾವರಣ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿ ಮಹಾತ್ಮೆ ಓದಿ.