ದಿನ ಭವಿಷ್ಯ    

13-10-2025

Oct 13, 2025 - 16:05
ದಿನ ಭವಿಷ್ಯ    


    
                  ಜ್ಯೋತಿರ್ಮಯ.                

ಅದೃಷ್ಟ ಸಂಖ್ಯೆ 3

೧.ಮೇಷ:

 ಹೊಸ ಸಪ್ತಾಹ ಆರಂಭದ ದಿನ ತಕ್ಕಮಟ್ಟಿಗೆ ಶುಭ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯಗಳು ಶೀಘ್ರವಾಗಿ ಮುಕ್ತಾಯ. ಉದ್ಯಮದ  ನೌಕರರಿಗೆ ವಿಶೇಷ ಅನುಕೂಲತೆಗಳು. ಮಹಿಳೆಯರ  ಸ್ವಾವಲಂಬನೆ ಯೋಜನೆ ಮುನ್ನಡೆ. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಆದಾಯ. ಗಣೇಶ ಕವಚ,ಶಿವ ಸಹಸ್ರನಾಮ, ಶನಿಮಹಾತ್ಮೆ ಓದಿ. 

  
 

 ೨.ವೃಷಭ:
  ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ.  ಕೃಷಿ ಕ್ಷೇತ್ರದ ಪ್ರಯೋಗಗಳು ಯಶಸ್ವಿ.   ಸರಕಾರಿ ಯೋಜನೆಗಳ‌ ಸೌಲಭ್ಯಗಳ ಬದಲು ಸ್ವಾವಲಂಬನೆಗೆ ಪ್ರಾಶಸ್ತ್ಯ. ಸತ್ಯ ನುಡಿದು ನಿಷ್ಠುರಕ್ಕೆ ಗುರಿಯಾಗುವ ಭೀತಿ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಕವಚ ಓದಿ.
 


೩ಮಿಥುನ:

  ಆತ್ಮವಿಶ್ವಾಸಭರಿತ ಸಾಧನೆಗೆ ಜಯ. ಉದ್ಯಮ ಅಭಿವೃದ್ಧಿಗೆ ಸಾಂಸ್ಥಿಕ  ನೆರವು ಪ್ರಾಪ್ತಿ.  ವಸ್ತ್ರ,  ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಅಧಿಕ  ಲಾಭ. ವ್ಯಾಪಾರಿಗಳ  ಮನೆಯಲ್ಲಿ  ಸಂತೋಷದ ವಾತಾವರಣ. ವ್ಯವಹಾರ ಸಂಬಂಧ  ಪ್ರಯಾಣ ಮುಂದಕ್ಕೆ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಆದಿತ್ಯ ಹೃದಯ ಓದಿ.

೪.ಕರ್ಕಾಟಕ:
  ಸಮಗ್ರ ಪ್ರಗತಿಯತ್ತ ವೇಗದ ಓಟ. ಉದ್ಯೋಗದಲ್ಲಿ  ಹಂತಹಂತವಾಗಿ  ಉನ್ನತಿ. ಅಕಸ್ಮಾತ್ ಧನಾಗಮ ಯೋಗ. ಕೃಷ್ಯುತ್ಪನ್ನ ಮಾರಾಟದಿಂದ ಉತ್ತಮ ಲಾಭ. ಆಸ್ತಿ ಪಾಲು ಮಾತುಕತೆಯಲ್ಲಿ ಭಾಗಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ನರಸಿಂಹ ಸ್ತೋತ್ರ, ಮಹಾಲಕದಷ್ಮಿ ಅಷ್ಟಕ ಓದಿ. 

 ೫.ಸಿಂಹ:
  ಹಿಂದಡಿಯಿಡದೆ ಮುನ್ನಡೆಯುವ ಪ್ರವೃತ್ತಿಗೆ ಜಯ. ಉದ್ಯೋಗ ಕ್ಷೇತ್ರದಲ್ಲಿ ಗೌರವದ ಹುದ್ದೆ. ಉದ್ಯಮಕ್ಕೆ ಸರ್ವತೋಮುಖ  ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ  ಲಾಭ. ಕೃಷಿ  ಕಾರ್ಮಿಕರಿಗೆ ಅನುಕೂಲದ ವಾತಾವರಣ. ಗಣೇಶ ಪಂಚರತ್ನ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
 
೬.ಕನ್ಯಾ:

 ಒಂದೇ ಉದ್ಯೋಗದಲ್ಲಿ ಮುಂದುವರಿಯಲು ನಿರ್ಧಾರ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಸಣ್ಣ ಪ್ರಯಾಣ ಸಂಭವ. ಗಣೇಶ ಸ್ತೋತ್ರ, ಶಿವನಾಮಾವಲ್ಯಷ್ಡಕ,, ಅನ್ನಪೂರ್ಣಾ ಸ್ತೋತ್ರ ಓದಿ.

೭. ತುಲಾ:

 ಯೋಗ್ಯತೆಗೆ ಸರಿಯಾದ ಗೌರವ, ಪ್ರತಿಫಲ  ಪ್ರಾಪ್ತಿ. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ.  ಹಿತಶತ್ರುಗಳ ಪರಾಭವ‌. ದೇವತಾ ಸಾನ್ನಿಧ್ಯ ದರ್ಶನ.  ಸಂಸಾರದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಕವಚ, ವಿಷ್ಣು ಸಹಸ್ರನಾಮ, ದೇವೀಸ್ತೋತ್ರ ಓದಿ.

೮.ವೃಶ್ಚಿಕ:

 ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ.   ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ವಸ್ತ್ರ, ವಾಹನ ವ್ಯಾಪಾರಿಗಳಿಗೆ ಲಾಭ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳಿಗೆ ಯಶಸ್ಸು. ಮಕ್ಕಳ ಹೊಸ ಉದ್ಯಮ ಯೋಜನೆ ಸಾಕಾರ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೯.ಧನು:

  ಕಠಿನ ಮಾರ್ಗದಲ್ಲಿ ಸಂಪಾದನೆ ವೃದ್ಧಿ. ಸಹೋದ್ಯೋಗಿಗಳಿಂದ  ಸಂಪೂರ್ಣ ಸಹಕಾರ.  ಸಣ್ಣ ಉದ್ಯಮ ಘಟಕಕ್ಕೆ ಸಮರ್ಥರ ನೇಮಕ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಖಾದ್ಯಪದಾರ್ಥ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಲಾಭ. ಗಣೇಶ ಕವಚ, ದಾರಿದ್ರ್ಯದಹನ ಶಿವಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.

೧೦.ಮಕರ:
 ಉದ್ಯೋಗ ಸ್ಥಾನದಲ್ಲಿ ಸೌಲಭ್ಯಗಳ ವೃದ್ಧಿ. ಉದ್ಯಮ ಉತ್ಪನ್ನಗಳ  ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ.  ಪ್ರಾಪ್ತ ವಯಸ್ಕ ಕನ್ಯೆಯರಿಗೆ ವಿವಾಹ ಯೋಗ. ಅರ್ಹತೆಗೆ ಸರಿಯಾದ ಉದ್ಯೋಗ ಅನ್ವೇಷಣೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.


 
೧೧. ಕುಂಭ:.

 ಕುಗ್ಗದ ಹುರುಪಿನೊಂದಿಗೆ  ಹೊಸ ಸಪ್ತಾಹದ  ಕಾರ್ಯಾರಂಭ. ಉದ್ಯೋಗ ಸ್ಥಾನದಲ್ಲಿ‌ ನಿಗದಿತ ಕಾರ್ಯಗಳು  ಮುಕ್ತಾಯ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣ‌ಸಾಮಗ್ರಿ,  ಸ್ಟೇಶನರಿ ವಿತರಕರಿಗೆ ಹೊಸಬರ ಸಂಪರ್ಕ. ಸಮಾಜಸೇವಾ ಕಾರ್ಯಗಳಿಗೆ ಹೊಸ ಆಯಾಮ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಶನಿಮಹಾತ್ಮೆಓದಿ.


೧೨. ಮೀನ:
ದಿನಗಳು  ಉರುಳಿದಂತೆ   ಇನ್ನಷ್ಟು ಕಾರ್ಯಗಳ  ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಆಹ್ವಾನ.  ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ  ಸಾರ್ವಜನಿಕರಿಂದ ಪ್ರಶಂಸೆ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಗಣೇಶ ಕವಚ, ದೇವೀಸ್ತೋತ್ರ, ಶನಿಮಹಾತ್ಮೆಓದಿ.