ದಿನ ಭವಿಷ್ಯ
31-07-2025

ಅದೃಷ್ಟ ಸಂಖ್ಯೆ 4
೧. ಮೇಷ:
ಸಕಾಲಿಕ ಸ್ಪಂದನದಿಂದ ಕಾರ್ಯಸಿದ್ಧಿ. ಉದ್ಯೋಗದಲ್ಲಿ ಜವಾಬ್ದಾರಿಗಳ ಬದಲಾವಣೆ. ಸರಕಾರಿ ಉದ್ಯೋಗಸ್ಥರಿಗೆ ನಿಶ್ಚಿಂತೆಯ ದಿನ. ಸಣ್ಣ ಉದ್ಯಮಿಗಳ ಸಮಸ್ಯೆಗಳು ಪರಿಹಾರ. ಸಣ್ಣಪುಟ್ಟ ಆರೋಗ್ಯದ ಸಮಸ್ಯೆ ನಿವಾರಣೆ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯನಾಶನ ಶಿವಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ನಿರಂತರ ಬದಲಾವಣೆಗಳ ಪ್ರಕ್ರಿಯೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಹುಡುಕಾಟ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಧ್ಯಾನ, ಯೋಗ, ದೈವ ಚಿಂತನೆಗೆ ಸಮಯ ಮೀಸಲು. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಆದಿತ್ಯಹೃದಯ ಓದಿ.
೩.ಮಿಥುನ:
ಲೋಕದ ಡೊಂಕನ್ನು ಅದರ ಪಾಡಿಗೆ ಬಿಟ್ಟುಬಿಡಿ. ಕೇಳಿದವರಿಗೆ ಮಾತ್ರ ಯಥೋಚಿತ ಸಲಹೆ. ಸರಕಾರಿ ನೌಕರರಿಗೆ ಸಮಾಧಾನ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ವಾಹನ ಚಾಲನೆಯಲ್ಲಿ ಅವಸರ ಬೇಡ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೪. ಕರ್ಕಾಟಕ:
ಎಣಿಸದ ರೀತಿಯಲ್ಲಿ ಯಶಸ್ಸಿನ ಅನುಭವ. ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ ಅನುಕೂಲದ ಸನ್ನಿವೇಶ. ಉದ್ಯಮಗಳಿಗೆ ಸರಕಾರಿ ನೆರವು ಲಭ್ಯ . ಮಹಿಳೆಯರ ಸ್ವೋದ್ಯೋಗ ಯೋಜನೆ ಉತ್ಪನ್ನಗಳಿಗೆ ಕೀರ್ತಿ. ನೀಚ ಜನರ ಪಿತೂರಿಗಳು ವಿಫಲ. ಗಣೇಶ ಅಷ್ಟಕ,ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೫.ಸಿಂಹ:
ಸದ್ದಿಲ್ಲದೆ ಮಾಡಿದ ಸಾಧನೆಗಳಿಗೆ ಗೌರವ. ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ವೇತನ ಏರಿಕೆ. ಉದ್ಯಮಕ್ಕೆ ಹೊಸರೂಪದೊಂದಿಗೆ ಕಾಯಕಲ್ಪ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ. ಗಣೇಶ ತ್ರಿಶತಿ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.
೬. ಕನ್ಯಾ:
ಸ್ಥೈರ್ಯ ಕಾಯ್ದುಕೊಂಡರೆ ಸರ್ವತ್ರ ಯಶಸ್ಸು. ಸಂಸ್ಥೆಯ ಪ್ರಮುಖರಿಂದ ನೌಕರರಿಗೆ ಪುರಸ್ಕಾರ. ಹಿರಿಯರ ಆಸ್ತಿಯಲ್ಲಿ ಕೃಷಿಕಾರ್ಯ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಊರಿನ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ ಮಹಾಲಕ್ಷ್ಮಿ ಅಷ್ಟಕ ಓದಿ.,
೭.ತುಲಾ:
ದೈವಾನುಗ್ರಹದಿಂದ ದೂರವಾದ ಆಪತ್ತು. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ವಾಹನ ಚಾಲನೆಯಲ್ಲಿ ವಿಶೇಷ ಎಚ್ಚರ. ಬಂಧುಗಳ ಸಾಂಸಾರಿಕ ಸಮಸ್ಯೆ ನಿವಾರಣೆಗೆ ಸಹಕಾರ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೮. ವೃಶ್ಚಿಕ:
ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಕೇಟರಿಂಗ್ ವ್ಯವಹಾರಸ್ಥರಿಗೆ ಅನುಕೂಲ. ದೈವಬಲ, ಮನೋಬಲದೊಂದಿಗೆ ಧನಬಲ ಸೇರಿ ಕಾರ್ಯಸಿದ್ಧಿ. ಗಣಪತಿ ಅಥರ್ವಶೀರ್ಷ ,ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ,ನವಗ್ರಹ ಮಂಗಲಾಷ್ಟಕ ಓದಿ.
೯. ಧನು:
ಆತ್ಮವಿಶ್ವಾಸದೊಂದಿಗೆ ದೈವವಿಶ್ವಾಸವನ್ನೂ ಬೆಳೆಸಿಕೊಳ್ಳುವ ಪ್ರಯತ್ನ. ಉದ್ಯಮದ ವೈವಿಧ್ಯೀಕರಣ ಯೋಜನೆ ಸಫಲ. ಹಿರಿಯ ನಾಗರಿಕರಿಗೆ ಸರಕಾರಿ ಸವಲತ್ತುಗಳು ಲಭ್ಯ. ಸಹಾಯ. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ಕುಶಲಕರ್ಮಿಗಳ ಸಾಧನೆಗೆ ಗೌರವ. ಗಣೇಶ ದ್ವಾದಶನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೦. ಮಕರ:
ಕಷ್ಟ,ಸುಖಗಳ ಅನುಭವದಿಂದ ಆತ್ಮವಿಕಾಸ. ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯಲ್ಲಿ ವಿಜಯ. ನಷ್ಟದಿಂದ ಚೇತರಿಸಲು ಉದ್ಯಮಿಗಳ ಪ್ರಯತ್ನ. ಕರಕುಶಲ ಸಾಮಗ್ರಿ ಉದ್ಯಮಿಗಳಿಗೆ ಅನುಕೂಲ. ಸಂಸಾರದಲ್ಲಿ ಹುಳಿ ಹಿಂಡುವವರಿಗೆ ಮುಖಭಂಗ. ಗಣೇಶ ಕವಚ, ಕಾರ್ತಿಕೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೧೧.ಕುಂಭ:
ಕೆಲಸ, ಕಾರ್ಯಗಳಲ್ಲಿ ಮುನ್ನಡೆ. ಉದ್ಯೋಗಸ್ಥರಿಗೆ ಅನುಕೂಲ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಕಲೋಪಾಸನೆಯಲ್ಲಿ ಆಸಕ್ತರಿಗೆ ಹರ್ಷ. ಗಣಪತಿ ಅಥರ್ವಶೀರ್ಷ, ವಿಶ್ವನಾಥಾಷ್ಟಕ, ಶನಿಮಹಾತ್ಮೆ ಓದಿ.
೧೨. ಮೀನ:
ವಾತಾವರಣ ಮಧ್ಯಮವಾಗಿದ್ದರೂ. ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಒಡನಾಡಿಗಳಿಂದ ಅನುಕೂಲ. ಸೇವಾ ರೂಪದ ಕಾರ್ಯಗಳು ಯಶಸ್ವಿ. ಜನಹಿತ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ತಿಂಡಿ, ಪಾನೀಯ ವ್ಯಾಪಾರಿಗಳಿಗೆ ಲಾಭ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.