ದಿನ ಭವಿಷ್ಯ

15-09-2025

Sep 15, 2025 - 14:30
ದಿನ ಭವಿಷ್ಯ

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ  6.

೧.ಮೇಷ:

ಸಪ್ತಾಹ ಆರಂಭದ ದಿನ ಶುಭದಾಯಕ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ. ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸು. ಆಪ್ತರಿಂದ ಅಯಾಚಿತ ನೆರವು ಲಭ್ಯ. ಗೃಹಿಣಿಯರ  ಪ್ರತಿಭೆ ಅರಳಲು ಅವಕಾಶ. ಗಣೇಶ ಅಷ್ಟಕ ದೇವೀಸ್ತೋತ್ರ,  ಶನಿ ಮಹಾತ್ಮೆ  ಓದಿ.

೨.ವೃಷಭ:

ಜಂಜಾಟದ ನಡುವೆ ಸಮಾಧಾನ. ಉದ್ಯೋಗದಲ್ಲಿ ಹೆಚ್ಚು ಸಂತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉತ್ಪನ್ನಗಳ ವೈವಿಧ್ಯ ಕಾಯ್ದುಕೊಳ್ಳಲು ಮೇಲಾಟ. ಹತ್ತಿರದ ಶಿವಕ್ಷೇತ್ರಕ್ಕೆ ಭೇಟಿ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಆದಿತ್ಯ ಹೃದಯ ಓದಿ.


೩. ಮಿಥುನ:

 ಸಜ್ಜನಿಕೆಯ ಜೊತೆಯಲ್ಲೇ ಸ್ವಾಭಿಮಾನವನ್ನು ಕಾಯ್ದುಕೊಳ್ಳಿ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ. ಹಿರಿಯರ ಮನೆಯ ಪಿತೃಕಾರ್ಯದಲ್ಲಿ ಭಾಗಿ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ. ಅಸ್ವಸ್ಥರಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೪.ಕರ್ಕಾಟಕ:

  ಉದ್ಯೋಗ ಸ್ಥಾನದ ಸ್ಥಿತಿ ಎಂದಿನಂತೆ. ಉದ್ಯಮದ ಉತ್ಪಾದನೆಗಳ ಗುಣಮಟ್ಟ  ಉಳಿಸಿಕೊಳ್ಳುವ ಪ್ರಯತ್ನ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಅಲ್ಪಾವಧಿ ಹೂಡಿಕೆ ಬೇಡ. ಕುಟುಂಬದಲ್ಲಿ ಹರ್ಷ, ಉತ್ಸಾಹದ ವಾತಾವರಣ. ಗಣೇಶ ಪಂಚರತ್ನ, ಶಿವಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೫_ಸಿಂಹ:

  ಹೆಚ್ಚು ದುಡಿಯುವುದು ಇಂದಿನ ಅನಿವಾರ್ಯತೆ. ವ್ಯಾಪಾರ ವೃದ್ಧಿಗೆ ಹೊಸ ಪರಿಚಯಸ್ಥರ ಸಹಾಯ. ಕಟ್ಟಡ ನಿರ್ಮಾಣ ವ್ಯವಹಾರ ವೇಗವೃದ್ಧಿ.  ಭೂವ್ಯವಹಾರ ನಡೆಸುವವರಿಗೆ ಅನುಕೂಲ. ದಂಪತಿಗಳ ವಿರಸ ಮುಕ್ತಾಯ.  ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.


೬.ಕನ್ಯಾ:

ಮನೆಯಲ್ಲಿ ಶಾಂತಿ,ಸಮಾಧಾನದ ಕ್ಷಣಗಳು.  ಆತ್ಮೀಯರ ಭೇಟಿಯಿಂದ ಹರ್ಷ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ. ಪೂರ್ವಜರ ಆಶೀರ್ವಾದ ಯಾಚನೆ ಕಾರ್ಯಕ್ರಮ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.


೭ತುಲಾ:

ದೈಹಿಕ ಅನಾರೋಗ್ಯದಿಂದ ಮುಕ್ತಿ. ಉದ್ಯೋಗದಲ್ಲಿ  ಸಾಮರ್ಥ್ಯಕ್ಕೆ ತಕ್ಕ ಅವಕಾಶ. ಕುಟುಂಬದ ಮನೆಯಲ್ಲಿ ಪಿತೃಕಾರ್ಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಕೀರ್ತನೆ, ಭಜನೆಯಿಂದ ಸಮಾಧಾನ‌. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೮.ವೃಶ್ಚಿಕ:

 ಆತ್ಮವಿಮರ್ಶೆಯ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಕೌಟುಂಬಿಕ ವಿವಾದ ಸುಲಭವಾಗಿ ತೀರ್ಮಾನ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಮನಸ್ಸು ಕೆಡಿಸುವ ಮಾತುಗಳನ್ನು ನಿರ್ಲಕ್ಷಿಸಿ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.

೯. ಧನು:

 ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ. ಸಹೋದ್ಯೋಗಿಗಳ  ಸದಭಿಪ್ರಾಯಕ್ಕೆ ಪಾತ್ರರಾಗುವಿರಿ.  ಸಣ್ಣ ಪ್ರಮಾಣದ  ಉದ್ಯಮಗಳಿಗೆ ಅನುಕೂಲ. ಹೈನುಗಾರಿಕೆ, ಜೇನು ವ್ಯವಸಾಯ ಫಲಪ್ರದ. ಬಾಳ ಸಂಗಾತಿಯ ಆರೋಗ್ಯ ಸುಧಾರಣೆ‌. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೧೦. ಮಕರ:
 ಮತ್ತೆ ತೀವ್ರವಾದ ಕೆಲಸದ ಒತ್ತಡ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನಿವೇಶನ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಲಾಭ. ಕೃಷ್ಯುತ್ಪನ್ನಗಳಿಗೆ ಒಳ್ಳೆಯ  ಬೇಡಿಕೆ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.

೧೧.ಕುಂಭ:

  ವ್ಯವಹಾರದಲ್ಲಿ  ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ   ಭೇಟಿ. ಸೇವಾಕಾರ್ಯಗಳಲ್ಲಿ ಮನೆಮಂದಿಯ ಸಹಕಾರ. ಮುದ್ರಣ ಸಾಮಗ್ರಿ, ಸ್ಟೇಶನರಿ  ವಿತರಕರ ವ್ಯಾಪಾರ ವೃದ್ಧಿ. ಹೊಸ ಪರಿಚಿತರಿಂದ ವ್ಯವಹಾರ ವೃದ್ಧಿಗೆ ಸಹಾಯ. ಗಣೇಶ ಕವಚ,‌ನರಸಿಂಹ ಕವಚ, ಶನಿಮಹಾತ್ಮೆ ಓದಿ.

೧೨.ಮೀನ:

ಆರಂಭದ ದಿನ ಶುಭದಾಯಕ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ.   ಅಪರಿಚಿತ  ವ್ಯಕ್ತಿಗಳಿಂದ  ಅನಿರೀಕ್ಷಿತ ಸಹಾಯ. ವಿಶಿಷ್ಟ ವ್ಯಕ್ತಿಯೊಬ್ಬರ ಭೇಟಿಯಿಂದ  ಅನುಕೂಲ.
ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ  ಓದಿ.