ದಿನ ಭವಿಷ್ಯ

21-09-2025

Sep 22, 2025 - 16:30
ದಿನ ಭವಿಷ್ಯ

                   ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ  3

೧. ಮೇಷ:
 ಉದ್ವೇಗ ಕಡಿಮೆಯಾದಷ್ಟು  ಬದುಕು ನಿರಾಳ. ವಾಹನ ಚಾಲನೆಯಲ್ಲಿ ಎಚ್ಚರ. ಅಪರೂಪದ ಬಂಧುಗಳ ಭೇಟಿ. ಮಹಾಲಯ ಅಮಾವಾಸ್ಯೆಯ ಪರ್ವದಿನದ ಕಾರ್ಯದಲ್ಲಿ ಭಾಗಿ ಗಣೇಶ ದ್ವಾದಶನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.


೨. ವೃಷಭ:
  ಕಾರ್ಯಗಳು  ನಿರೀಕ್ಷೆಗಿಂತ ಹೆಚ್ಚು ಸುಲಭ. ಮನೆಯಲ್ಲಿ ಸಮಾಧಾನದ ವಾತಾವರಣ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಮಾರಾಟ ಹೆಚ್ಚಳ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೩ಮಿಥುನ:
ವ್ಯಾವಹಾರಿಕ ದೃಷ್ಟಿಯಿಂದ ಶುಭಕಾಲ. ಶಾರೀರಿಕ ತೊಂದರೆಗಳಿಂದ ಮುಕ್ತಿ. ಉದ್ಯೋಗಸ್ಥರಿಗೆ  ವಿರಾಮದಿಂದಾಗಿ  ನೆಮ್ಮದಿ. ವ್ಯವಹಾರಸ್ಥರಿಗೆ ಲಾಭ ತರುವ  ದಿನ. ದೃಢವಾದ  ಆತ್ಮವಿಶ್ವಾಸದಿಂದ  ಕಾರ್ಯಜಯ. ಗಣೇಶ ಕವಚ, ಶಿವ ಸಹಸ್ರನಾಮ, ಅನ್ನಪೂರ್ಣಾ ಸ್ತೋತ್ರ ಓದಿ.


೪. ಕರ್ಕಾಟಕ:

ಒಟ್ಟಿನಲ್ಲಿ ಶುಭಫಲಗಳೇ ಅಧಿಕ. ಉದ್ಯೋಗಸ್ಥರಿಗೆ   ನೆಮ್ಮದಿಯ ವಾತಾವರಣ. ಪಾಲುದಾರಿಕೆ ವ್ಯವಹಾರ ಮುನ್ನಡೆ. ಕಟ್ಟಡ ನಿರ್ಮಾಣ-ಮಾರಾಟ  ವ್ಯವಹಾರಸ್ಥರಿಗೆ   ಉತ್ತಮ ಲಾಭ. ರಾತ್ರಿ ಪ್ರಯಾಣ ಮಾಡದಿರಿ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೫.ಸಿಂಹ:
ಆನಂದವನ್ನು ಉದಾರವಾಗಿ. ಹಂಚಿಕೊಳ್ಳಿ ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮೀ ಕಟಾಕ್ಷ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ  ಯಶಸ್ಸು. ಹತ್ತಿರದ  ಶಿವ ಪಾರ್ವತಿ ಕ್ಷೇತ್ರಕ್ಕೆ ಭೇಟಿ. ಗಣೇಶ ಅಷ್ಟಕ, ದಕ್ಷಿಣಾಮೂರ್ತಿ ಸ್ತೋತ್ರ, ಗುರುಸ್ತೋತ್ರ ಓದಿ.

೬. ಕನ್ಯಾ:
ಎಲ್ಲವನ್ನೂ ಸಾಧ್ಯಗೊಳಿಸುವ ದೈವಾನುಗ್ರಹಕ್ಕಾಗಿ‌ ಪ್ರಾರ್ಥನೆ ಅನಿರೀಕ್ಷಿತ ಮೂಲದಿಂದ  ಧನಪ್ರಾಪ್ತಿ.   ಸಹೋದ್ಯೋಗಿಯ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ರಾಮ ಭುಜಂಗ ಪ್ರಯಾತ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೭. ತುಲಾ:
 ದಿನವೂ ನೆನಪಿಸುವ ಗೆಳೆಯನ ಆಗಮನ. ನಾಳೆಯ ಕೆಲಸ ಕಾರ್ಯಗಳ ತಯಾರಿ.  ನಿವೇಶನ, ಮನೆ ಖರೀದಿ- ಮಾರಾಟಗಾರರಿಗೆ ಅನುಕೂಲ. ಹಣ್ಣು, ತರಕಾರಿ ವ್ಯಾಪಾರ ತೃಪ್ತಿಕರ.  ಹಿರಿಯರಿಗೆ ಉಲ್ಲಾಸದ ವಾತಾವರಣ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.


೮.ವೃಶ್ಚಿಕ:

  ನಾಳೆ ಆರಂಭವಾಗುವ ನವರಾತ್ರಿ ಹಬ್ಬಕ್ಕೆ ತಯಾರಿ. ಆಸ್ತಿ, ಮನೆ ದಳ್ಳಾಳಿಗಳಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ  ಸಾಮಾನ್ಯ ಲಾಭ.  ವಿದೇಶದಲ್ಲಿರುವ ಮಕ್ಕಳೊಂದಿಗೆ ಮಾತುಕತೆ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಆದಿತ್ಯ ಹೃದಯ ಓದಿ.

೯.ಧನು:
 ವಿರಾಮದ ದಿನವಾದರೂ ನಾಳೆಯ ಕಾರ್ಯಗಳ ತಯಾರಿ. ಅ ಹೊಂದಾಣಿಕೆ, ನಿಷ್ಠೆಗಳಿಂದ  ಕಾರ್ಯಸಾಧನೆ. ದಕ್ಷತೆ, ಪರಿಪೂರ್ಣತೆಗೆ ಸಾರ್ವತ್ರಿಕ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ. ವ್ಯವಹಾರ ಸಂಬಂಧ ಪ್ರಯಾಣ ಮುಂದೂಡಿಕೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೧೦.ಮಕರ:
ಶೀಘ್ರಕೋಪ, ಆತಂಕಗಳನ್ನು ಬಿಟ್ಟಷ್ಟೂ ಕ್ಷೇಮ. ವೃತ್ತಿಪರರಿಗೆ ವಾರದ ವಿರಾಮ ಇಲ್ಲದೆ ದುಡಿಮೆ. ಪಾಲುದಾರಿಕೆ ವ್ಯವಹಾರದಲ್ಲಿ ಮುನ್ನಡೆ.  ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ.ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.


೧೧. ಕುಂಭ:
ಒಬ್ಬರ ಪಾಲಿಗೇ ಹೆಚ್ಚು ಜವಾಬ್ದಾರಿಗಳು ಬರುವ ಸಾಧ್ಯತೆ. ಸಾಮಾಜಿಕ ಚಟುವಟಿಕೆಗಳ ಒತ್ತಡ.  ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಅವಿಶ್ರಾಂತ  ಚಟುವಟಿಕೆಗಳಿಂದ ಆಯಾಸ.  ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಕವಚ, ಶಿವಕವಚ,ಶನಿಮಹಾತ್ಮೆ  ಓದಿ.

೧೨. ಮೀನ:
ಇನ್ನಷ್ಟು ಹೊಣೆಗಾರಿಕೆಗಳಿಗೆ ಸಿದ್ಧರಾಗಿರಿ. ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ವಸ್ತ್ರ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅನುಕೂಲ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ  ಓದಿ.