ದಿನ ಭವಿಷ್ಯ
16-10-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 7
೧. ಮೇಷ
ಅವಸರದಲ್ಲಿ ಹೊಸ ಕಾರ್ಯ ನಿಯೋಜನೆ. ಉದ್ಯಮಿಗಳಿಗೆ ಆದಾಯದ ಪ್ರಮಾಣ ಹೆಚ್ಚಳ. ವ್ಯವಹಾರ ವಿಸ್ತರಣೆಯಿಂದ ಅನುಕೂಲ. ಶೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೨. ವೃಷಭ:
ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಅನುಕೂಲ. ಸರಕಾರಿ ಅಧಿಕಾರಿಗಳಿಗೆ ಶತ್ರುಪೀಡೆ. ವ್ಯವಹಾರಾರ್ಥ ಸಣ್ಣ ಪ್ರಯಾಣದ ಸಾಧ್ಯತೆ. ಆಹಾರದಲ್ಲಿ ನಿಯಮ ಪಾಲನೆ ಇರಲಿ. ಸಂಸಾರದಲ್ಲಿ, ಪ್ರೀತಿ, ವಿಶ್ವಾಸ , ಸಾಮರಸ್ಯವೃದ್ಧಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೩. ಮಿಥುನ:
ಉದ್ಯೋಗಸ್ಥರಿಗೆ ಹೆಚ್ಚು ದುಡಿಯಲು ಉತ್ತೇಜನ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಕೃಷಿ ಆದಾರಿತ ಉದ್ಯಮಗಳಿಗೆ ಶುಭ.. ಕಮಿಶನ್ ಏಜೆಂಟರಿಗೆ, ಲೈನ್ ಸೇಲ್ಸ್ ಮಾಡುವವರಿಗೆ ಲಾಭ. ಮಿತ್ರದ್ರೋಹಿಗಳ ವಿಷಯದಲ್ಲಿ ಎಚ್ಚರ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೪. ಕರ್ಕಾಟಕ:
ಹೊಸ ವಿಭಾಗದ ನಿರ್ವಹಣೆಯಲ್ಲಿ ತೃಪ್ತಿ. ಮಾಲಿಕರು ಮತ್ತು ನೌಕರರ ನಡುವೆ ಸಹಕಾರ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ. ಪ್ರಾಪ್ತ ವಯಸ್ಕರಿಗೆ ವಿವಾಹ ಯೋಗ. ವಚನಭ್ರಷ್ಟರಿಂದ ದ್ರೋಹವಾಗುವ ಸಾಧ್ಯತೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೫. ಸಿಂಹ:
ಎಲ್ಲ ವಿಭಾಗಗಳಲ್ಲೂ ಯಶಸ್ಸು ಪ್ರಾಪ್ತಿ. ನೌಕರ ವರ್ಗಕ್ಕೆ ಸಮಾಧಾನದ ಭಾವ. ಸ್ವೋದ್ಯೋಗಿ ಮಹಿಳೆಯರಿಗೆ ಸಂಪೂರ್ಣ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ದೇವಾಲಯ ದರ್ಶನದಿಂದ ಮನಶ್ಶಾಂತಿ. ಗಣಪತಿ ಅಥರ್ವಶೀರ್ಷ, ಕಾರ್ತಿಕೇಯ ಸ್ತೋತ್ರ, ಗುರುಸ್ತೋತ್ರ ಓದಿ.
೬. ಕನ್ಯಾ:
ಕಾರ್ಯಗಳು ಯೋಜನೆಯಂತೆ ಸಕಾಲದಲ್ಲಿ ಮುಕ್ತಾಯ. ಉದ್ಯೋಗದಲ್ಲಿ ನಿಯತ್ತಿನ ದುಡಿಮೆಗೆ ಗೌರವ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಹಿತೈಷಿಗಳ ಸಲಹೆಯಿಂದ ಕುಟುಂಬದಲ್ಲಿ ಶಾಂತಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೭. ತುಲಾ:
ಅನಾಯಾಸವಾಗಿ ಉದ್ಯೋಗ ನಿರ್ವಹಣೆ. ಸಣ್ಣ ಉದ್ಯಮ ಘಟಕಗಳಿಗೆ ಶುಭದಿನ. ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಯೋಗ. ಹಣ್ಣು, ತರಕಾರಿ ಬೆಳೆಗಾರರಿಗೆ ಸಾಮಾನ್ಯ ಲಾಭ. ಬರಹಗಾರರಿಗೆ ಹರ್ಷ ತರುವ ಘಟನೆ. ಗಣೇಶ ಕವಚ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
೮.ವೃಶ್ಚಿಕ:
ಲೌಕಿಕ ಸಾಧನೆಯ ದೃಷ್ಟಿಯಿಂದ ಸಮಾಧಾನದ ದಿನ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು. ಅತಿಥಿ ಸತ್ಕಾರದಿಂದ ಆನಂದ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಸಂಗೀತ ಅಭ್ಯಾಸಿಗಳಿಗೆ ಉತ್ತೇಜನ ಪ್ರಾಪ್ತಿ. ಗಣೇಶ ಸ್ತೋತ್ರ, ದತ್ತಪಂಜರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೯. ಧನು:
ಸಂಗಾತಿಯ ಆರೋಗ್ಯ ಸುಧಾರಣೆ. ಕೃಷಿ ಕ್ಷೇತ್ರದಲ್ಲಿ ಸಾಧಾರಣ ಲಾಭ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಯಥೇಚ್ಛ ಆದಾಯ. ಅನ್ಯಪ್ರಾಂತದಲ್ಲಿರುವ ಆಪ್ತರ ಆಗಮನ. ಇಷ್ಟದೇವರ ಸ್ಮರಣೆಯಿಂದ ಸಮಾಧಾನ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ದೇವೀಕವಚ ಓದಿ.
೧೦. ಮಕರ:
ಉದ್ಯೋಗ ಸ್ಥಾನದಲ್ಲಿ ತರಾತುರಿ. ವಸ್ತ್ರ, ಆಭರಣ, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ. ವಿದ್ಯುತ್ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ. ಸ್ವಂತದ ಆರೋಗ್ಯದ ಕುರಿತು ಎಚ್ಚರ. ಆಧ್ಯಾತ್ಮಿಕ ಸಾಧನೆಗೆ ಪದೇಪದೇ ವಿಘ್ನ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:
ಉದ್ಯಮದ ಉತ್ಪನ್ನಗಳಿಗೆ ಎಲ್ಲೆಡೆಗಳಿಂದ ಬೇಡಿಕೆ. ಯಂತ್ರೋಪಕರಣ ಮತ್ತು ವಾಹನ ಬಿಡಿಭಾಗಗಳ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ. ತರುಣರ ಸಾಹಸ ಪ್ರವೃತ್ತಿಗೆ ಅನುಕೂಲ ಸನ್ನಿವೇಶ. ಹಿರಿಯ ನಾಗರಿಕರಿಗೆ ಅನುಕೂಲದ ದಿನ. ಗಣೇಶ ದ್ವಾದಶನಾಮ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ದೈವಾನುಗ್ರಹದಿಂದ ಎಲ್ಲ ಕಾರ್ಯಗಳು ಕ್ಷೇಮವಾಗಿ ಮುಕ್ತಾಯ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ . ಸರಕಾರಿ ಕಾರ್ಯಾಲಯಗಳಲ್ಲಿ ಹಿತಾನುಭವ.. . ಸಮಯಕ್ಕೆ ಸರಿಯಾದ ಸೇವೆಯಿಂದ ಗ್ರಾಹಕರಿಗೆ ಹರ್ಷ. ಪೂರಕ ವೃತ್ತಿಯಲ್ಲಿ ಹೆಚ್ಚು ಸಮಾಧಾನ.. .ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.