ದಿನ ಭವಿಷ್ಯ

25-10-2025

Oct 25, 2025 - 14:03
ದಿನ ಭವಿಷ್ಯ

               ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 7

೧.ಮೇಷ:

  ದೈವಸಂಕಲ್ಪದಂತೆ ಏರ್ಪಡುವ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ  ನಿಶ್ಚಿಂತೆ. ಉದ್ಯಮ,  ವ್ಯವಹಾರದಲ್ಲಿ ಉತ್ತಮ ಲಾಭ. ದೂರದಲ್ಲಿರುವ ನೆಂಟರ ಆಗಮನ. ಅಧ್ಯಾತ್ಮದ ಕಡೆಗೆ ಒಲವು, ಎಲ್ಲ ಬಗೆಯ ನೆಮ್ಮದಿ. ಗಣಪತಿ ಅಥರ್ವಶೀರ್ಷ, ನರಸಿಂಹ ಸ್ತೋತ್ರ, ಶನಿಮಹಾತ್ಮೆ ಓದಿ.

೨.ವೃಷಭ:

 ಇಚ್ಛಾಪೂರ್ತಿಯಾಗುವ ದಿನ ಎನ್ನ ಬಹುದು. ಅಧಿಕಾರಿಗಳಿಗೆ  ಇಷ್ಟಪಟ್ಟಲ್ಲಿಗೆ ವರ್ಗಾವಣೆ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ.  ಉದ್ಯೋಗಾಸಕ್ತರಿಗೆ  ಅನುಕೂಲಕರ  ಅವಕಾಶಗಳು. ಅವಿವಾಹಿತರಿಗೆ  ಅನುರೂಪಿ ಸಂಗಾತಿ ಲಭ್ಯ. ಗಣೇಶ ತ್ರಿಶತಿ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೩. ಮಿಥುನ:

 ಹೊಂದಿಕೊಳ್ಳುವ ಸ್ವಭಾವಕ್ಕೆ ಯೋಗ್ಯ ಪ್ರತಿಫಲ. ಹೊಸ ಸಹೋದ್ಯೋಗಿಗಳಿಗೆ ಜವಾಬ್ದಾರಿ ಹಂಚಿಕೆ. ಉದ್ಯಮಕ್ಕೆ ಎದುರಾಳಿಗಳಿಂದ  ಸ್ಪರ್ಧೆ. ಹಿತಶತ್ರುಗಳ  ಹುನ್ನಾರದ ಕುರಿತು ಎಚ್ಚರಿಕೆ. ದೇವತಾರ್ಚನೆ, ಧ್ಯಾನ, ಸತ್ಸಂಗದಲ್ಲಿ ಆಸಕ್ತಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
 

೪.ಕರ್ಕಾಟಕ:

 ಉದ್ಯೋಗ ಸ್ಥಾನದಲ್ಲಿ ಸತತ ಪರಿಶ್ರಮಕ್ಕೆ ಗೌರವ. ಉದ್ಯಮದ ನೌಕರರ ಯೋಗಕ್ಷೇಮಕ್ಕೆ ವ್ಯವಸ್ಥೆ. ಖಾದಿ, ಗ್ರಾಮೋದ್ಯೋಗ  ಬೆಳೆಸಲು ಆಸಕ್ತಿ. ಬಂಧುಗಳೊಡನೆ ವಿರಸಕ್ಕೆ ಎಡೆಗೊಡದಿರಿ. ಧ್ಯಾನ, ಭಜನೆ, ಸತ್ಸಂಗಗಳ ಕಡೆಗೆ ಒಲವು. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.


೫ ಸಿಂಹ:

 ಉದ್ಯೋಗ ಸ್ಥಾನದಲ್ಲಿ ಹೊಸ ವ್ಯವಸ್ಥೆಗಳು ಆರಂಭ. ಉದ್ಯಮದ  ಉತ್ಪನ್ನಗಳಿಗೆ ಹೊರಗಿನಿಂದ  ಬೇಡಿಕೆ ಹೆಚ್ಚಳ. ಉತ್ತರದ ಕಡೆಯಿಂದ ಪ್ರೋತ್ಸಾಹಕರ ವಾರ್ತೆ. ಮಹಿಳೆಯರ ಗೃಹೋದ್ಯಮ ಯಶಸ್ಸಿನತ್ತ ಮುನ್ನಡೆ. ದೂರಕ್ಕೆ ರಾತ್ರಿ ಪ್ರಯಾಣ ಬೇಡ. ಗಣೇಶ ದ್ವಾದಶನಾಮ ಸ್ತೋತ್ರ, ಕಾರ್ತಿಕೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

೬.ಕನ್ಯಾ:

ವಾರಾಂತ್ಯ ಬಂದಾಗ ಹೊಸ ಅನುಭವ. ಸರಕಾರಿ ಉದ್ಯೋಗಿಗಳಿಗೆ ಕೊಂಚ ಆತಂಕ. ಇಲೆಕ್ಟ್ರಾನಿಕ್ಸ್ ಉದ್ಯಮಗಳಿಗೆ ಅಧಿಕ ಬೇಡಿಕೆ. ವೃತ್ತಿ ಪರಿಣತಿ ವೃದ್ಧಿಗೆ  ಪ್ರಯತ್ನ ಆರಂಭ. ಕುಟುಂಬದ ಆರಾಧನಾ ಸ್ಥಾನಕ್ಕೆ ಸಂದರ್ಶನ. ಗಣೇಶ ಕವಚ, ಶಿವ ಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೭ತುಲಾ:

 ಅದೃಷ್ಟ ಒಲಿಯುವ ಸಮಯ ಸನ್ನಿಹಿತ. ಮನೋಬಲ ವೃದ್ಧಿಗೆ ಸಾಧನೆ ಮುಂದುವರಿಕೆ. ವೃತ್ತಿ ಪರಿಣತಿ ಹೊಂದಲು ಹಳಬರ ಮಾರ್ಗದರ್ಶನ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ  ಭೇಟಿ. ಪರಂಪರಾಗತ ವಿಧಾನದಿಂದ ಆರೋಗ್ಯ ಪ್ರಾಪ್ತಿ. ಗಣೇಶ ಅಷ್ಟಕ, ಹನುಮಾನ್ ಚಾಲೀಸಾ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೮.ವೃಶ್ಚಿಕ:

ಕಾಲಕ್ಕೆ ಸರಿಯಾಗಿ‌ ಹೊಂದಿಕೊಳ್ಳುವ ಅನಿವಾರ್ಯತೆ. ಉದ್ಯೋಗ ಸ್ಥಾನದಲ್ಲಿ ತಾತ್ಕಾಲಿಕ ಹಿನ್ನಡೆ.  ಉದ್ಯಮ ಸ್ಥಾನದಲ್ಲಿ ನಿಧಾನ ಪ್ರಗತಿ.  ಉದ್ಯೋಗ ಅರಸುವ ಶಿಕ್ಷಿತರಿಗೆ ಶುಭ ಸಮಾಚಾರ.
ಪಾಲುದಾರಿಕೆ ವ್ಯವಹಾರದಿಂದ ಅನುಕೂಲ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೯. ಧನು:

  ಬದುಕಿನಲ್ಲಿ ಅನಿವಾರ್ಯವಾದ   ನಿತ್ಯ ಹೋರಾಟ. ಉದ್ಯೋಗದಲ್ಲಿ ಯೋಗ್ಯತೆಗೆ ಸರಿಯಾದ ಸ್ಥಾನ ಲಭ್ಯ. ಗೃಹೋದ್ಯಮದ ವ್ತವಹಾರ ಸುಧಾರಣೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸಂಸಾರದಲ್ಲಿ ಪ್ರೇಮ, ವಿಶ್ವಾಸದ ವಾತಾವರಣ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

 

೧೦. ಮಕರ:

ಹಬ್ಬದ ಬಳಿಕ ಇಮ್ಮಡಿ ಉತ್ಸಾಹ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ.  ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ   ನಿರೀಕ್ಷೆ ಮೀರಿದ ಲಾಭ. ಪೂಜೆ, ಧ್ಯಾನ, ಸ್ವಾಧ್ಯಾಯಕ್ಕೆ ಗಮನ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

  ಉದ್ಯೋಗಸ್ಥಾನದಲ್ಲಿ ಹೊಸಬರಿಗೆ ಮಾರ್ಗದರ್ಶನ. ಉದ್ಯಮದ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳ ವಿತರಕರಿಗೆ ಅಪಾರ ಬೇಡಿಕೆ.  ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಉದ್ಯೋಗಾಸಕ್ತರ ಕೈಗೆ ಬರುವ ಅವಕಾಶ. ಗಣೇಶ ಕವಚ, ರಾಮ ಭುಜಂಗಪ್ರಯಾತ ಸ್ತೋತ್ರ, ಶನಿಮಹಾತ್ಮೆ ಓದಿ.

೧೨.ಮೀನ:

 
 ಎಷ್ಟು ಕೆಲಸ ಬಂದರೂ ನಿರ್ವಹಿಸುವ ಸಾಮರ್ಥ್ಯ. ಸಹೋದ್ಯೋಗಿಗಳಿಂದ ಸರ್ವವಿಧ ಸಹಾಯ. ಸರಕಾರಿ ಇಲಾಖೆಗಳಲ್ಲಿ ಸಕಾರಾತ್ಮಕ  ಸ್ಪಂದನ.  ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನೂತನ ವ್ಯವಸ್ಥೆ. ಹಿರಿಯರ  ಆರೋಗ್ಯ ಕ್ಷಿಪ್ರ ಸುಧಾರಣೆ.
ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.