ದಿನ ಭವಿಷ್ಯ                  

02-08-2025

Aug 2, 2025 - 03:00
ದಿನ ಭವಿಷ್ಯ                   

ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 2

೧. ಮೇಷ:
  ಪೂರ್ವಾಹ್ನ ಸ್ವಲ್ಪ ಅತಂತ್ರ ಸ್ಥಿತಿ, ಅನಂತರ ಸುಧಾರಣೆ. ಉದ್ಯೋಗ ಸ್ಥಾನದಲ್ಲಿ  ಸಣ್ಣ ತಕರಾರು. ಉದ್ಯಮದ  ಉತ್ಪನ್ನಗಳ ಮಾರಾಟ ವ್ಯವಸ್ಥೆ ವಿಸ್ತರಣೆ. ಸಾಂಸಾರಿಕ ಜೀವನದಲ್ಲಿ ಸೌಖ್ಯ. ಗೃಹಿಣಿಯರ ಸ್ವೋದ್ಯೋಗಕ್ಕೆ ಶುಭದಿನ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

 

೨.ವೃಷಭ:

  ಕೆಲವರಿಗೆ ಅರ್ಧದಿನ, ಕೆಲವರಿಗೆ ಇಡೀದಿನ ವಿರಾಮ. ಏಕಾಗ್ರಚಿತ್ತದ  ಪ್ರಯತ್ನಕ್ಕೆ  ಜಯ. ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಸಾಂಸಾರಿಕ ಕ್ಷೇತ್ರದಲ್ಲಿ ಸಮಾಧಾನದ ಪರಿಸ್ಥಿತಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೩ಮಿಥುನ:

  ಉದ್ಯೋಗ ಸ್ಥಾನದಲ್ಲಿ  ಹೊಸ ವಿಭಾಗಗಳಿಗೆ ಚಾಲನೆ. ಗೃಹೋದ್ಯಮದ ಉತ್ಪನ್ನಗಳಿಗೆ ಅನುಕೂಲದ ವಾತಾವರಣ. ಕೃಷ್ಯುತ್ನನ್ನ ವೃದ್ಧಿಯಾಗುವ ಸೂಚನೆ. ಹಿರಿಯರ, ಗೃಹಿಣಿಯರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ. ಆಧ್ಯಾತ್ಮಿಕ ಸಾಧನೆಯಲ್ಲಿ ಮುನ್ನಡೆ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೪. ಕರ್ಕಾಟಕ:

 ಸಹೋದ್ಯೋಗಿಗಳೊಂದಿಗೆ ಸದ್ಭಾವನೆ ವಿನಿಮಯ. ಉದ್ಯಮದ ಅಭಿವೃದ್ಧಿಗೆ ತಡೆಯಿಲ್ಲ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳು, ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂಭ್ರಮ. ಹತ್ತಿರದ ದೇವಿ ಆಲಯಕ್ಕೆ ಭೇಟಿ. ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಕನಕಧಾರಾ ಸ್ತೋತ್ರ ಓದಿ.


೫.ಸಿಂಹ:

  ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಪೊಲೀಸ್ ಇಲಾಖೆಯವರ ಸತ್ವಪರೀಕ್ಷೆ. ಭೂ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ದಂಪತಿಗಳ ನಡುವೆ ಪ್ರೀತಿ, ವಿಶ್ವಾಸ ವೃದ್ಧಿ.  ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ. ಗಣೇಶ ತ್ರಿಶತಿ ಸ್ತೋತ್ರ, ದೇವೀಕವಚ, ನವಗ್ರಹ ಮಂಗಲಾಷ್ಟಕ ಓದಿ.


೬.ಕನ್ಯಾ:

  ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಸಹಕಾರ. ಸಾರ್ವಜನಿಕ ಸಂಪರ್ಕದಲ್ಲಿ ಅಪಾರ ಯಶಸ್ಸು. ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ಜಾಲ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ  ನಿರೀಕ್ಷೆಗಿಂತ ಅಧಿಕ ಲಾಭ. ಸುಶಿಕ್ಷಿತ
ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೭. ತುಲಾ:

  ಪೂರ್ಣ  ದೈವಾನುಗ್ರಹದ ದಿನ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಧ್ಯಾಪಕ ವೃತ್ತಿಯವರಿಗೆ ಹೆಚ್ಚಿನ ಜವಾಬ್ದಾರಿ. ಸಣ್ಣ ವ್ಯಾಪಾರಿಗಳಿಗೆ ನಿರೀಕ್ಷೆಗೆ ತಕ್ಕ ಲಾಭ.  ಹಿತಶತ್ರುಗಳ ದುಷ್ಟ ಯೋಜನೆಗೆ ಪರಾಜಯ. ಗಣೇಶ ಕವಚ, ದುರ್ಗಾ ಸ್ರೋತ್ರ, ನವಗ್ರಹ ಸ್ತೋತ್ರ ಓದಿ.,

೮.ವೃಶ್ಚಿಕ:

  ಘಟನೆಗಳಿಗೆ ಸಮಚಿತ್ತದಿಂದ ಪ್ರತಿಕ್ರಿಯಿಸಿ. ಪ್ರಾಪಂಚಿಕ ಸುಖದಲ್ಲಿ ಕೊರತೆ ಇಲ್ಲ. ಉದ್ಯಮದ ನೌಕರರ ಪೂರ್ಣ ಸಹಕಾರ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ವಿನಿಯೋಗ. ಮನೆಯಲ್ಲಿ ಸಮಾಧಾನದ ವಾತಾವರಣ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೯.ಧನು:

  ದೀರ್ಘ ಕಾಲ ಕಾದ ಬಳಿಕ ಸಿಕ್ಕಿದ ಲಾಭ. ಉಳಿತಾಯ ಏಜಂಟರಿಗೆ ಶುಭದಿನ. ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ. ಸರಕಾರಿ ಕಚೇರಿಗಳಲ್ಲಿ ಸಕಾರಾತ್ಮಕ  ಸ್ಪಂದನ. ಕೃಷ್ಯುತ್ಪಾದನೆ‌ ಮಾರಾಟದಲ್ಲಿ ಲಾಭ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ. ಗಣೇಶ ಪಂಚರತ್ನ, ಮಹಾಲಕ್ಷ್ಮಿ ಅಷ್ಟಕ, ಹನುಮಾನ್ ಚಾಲೀಸಾ ಓದಿ.

೧೦.ಮಕರ:

  ಅನಿರೀಕ್ಷಿತ ಧನಲಾಭ.  ಹೊಸ ಹೂಡಿಕೆ ಯೋಜನೆ ಅನುಷ್ಠಾನಕ್ಕೆ ಯತ್ನ  ಹಿರಿಯರ ಆವಶ್ಯಕತೆಗಳನ್ನು ಗಮನಿಸಿ. ವಸ್ತ್ರ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಮಹಿಳೆಯರ ಸ್ವೋದ್ಯೋಗ ಯೋಜನೆಗೆ ಮುನ್ನಡೆ. ಗಣೇಶ ಕವಚ, ರಾಮ ಭುಜಂಗಪ್ರಯಾತ ಸ್ತೋತ್ರ, ಶನಿಸ್ತೋತ್ರ ಓದಿ.

ಉಉದ್ಅಗಹ

 
೧೧. ಕುಂಭ:

ಸಂತೃಪ್ತ ಮನೋಭಾವದಲ್ಲಿ ದಿನಾರಂಭ ಉದ್ಯಮದಲ್ಲಿ ಪ್ರಚಂಡ ಮುನ್ನಡೆ. ಉದ್ಯೋಗ ಕ್ಷೇತ್ರದಲ್ಲಿ ಗುರುಸ್ಥಾನ ಭದ್ರ. ಮುದ್ರಣ ಸಾಮಗ್ರಿ, ಸ್ಟೇಶನರಿ, ವಸ್ತ್ರ, ಆಭರಣ ಇತ್ಯಾದಿಗಳಿಗೆ ಅಧಿಕ‌ ಬೇಡಿಕೆ. ಪಾಲುದಾರಿಕೆ ಪ್ರಸ್ತಾವ ಸ್ವೀಕಾರ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಮಹಾತ್ಮೆ ಓದಿ

೧೨. ಮೀನ:

 ವ್ಯವಹಾರಗಳಲ್ಲಿ ಸ್ಥಿರವಾದ ಪ್ರಗತಿ. ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಸಹಕಾರ. ಸೇವಾ‌ ಮಾದರಿಯ ಉದ್ಯೋಗಸ್ಥರಿಗೆ  ಅಧಿಕ ಯಶಸ್ಸು. ಸಾಂಸಾರಿಕ ಜೀವನದಲ್ಲಿ ಹರ್ಷ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.