ದಿನ ಭವಿಷ್ಯ
28-06-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 1
೧.ಮೇಷ:
ಶನಿವಾರದಂದೇ ಮುಖ್ಯ ಕೆಲಸಗಳು ಮುಕ್ತಾಯ. ಉದ್ಯಮದ ನೌಕರರಿಗೆ ಹೆಚ್ಚಿದ ಕಾರ್ಯೋತ್ಸಾಹ. ಮಹಿಳೆಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ ಹೆಚ್ಚಳ. ಕುಟುಂಬದ ಹಿರಿಯ ಮನೆಯಲ್ಲಿ ದೇವತಾ ಕಾರ್ಯ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.
೨.ವೃಷಭ:
ಉದ್ಯೋಗಸ್ಥರಿಗೆ ಯಥಾಸ್ಥಿತಿಯ ಅನುಭವ. ಇಂದಿನಅರ್ಧ ಅಥವಾ ಪೂರ್ಣವಿರಾಮ ಸದುಪಯೋಗ. ವ್ಯಾಪಾರಿ ವರ್ಗಕ್ಕೆ ಅನುಕೂಲದ ದಿನ. ಹಿತಮಿತವಾದ ನುಡಿಯಿಂದ ಕ್ಷೇಮ.ಸಂಸಾರದಲ್ಲಿ ಸಂತೃಪ್ತಿಯ ವಾತಾವರಣ. ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.
೩ಮಿಥುನ:
ಕೈತಪ್ಪಿದ ಅವಕಾಶವನ್ನು ಮತ್ತೆ ಪಡೆಯುವ ಪ್ರಯತ್ನ. ಬೌದ್ಧಿಕ ಕೆಲಸಗಾರರಿಗೆ ಸವಾಲಿನ ದಿನ. ವಸ್ತ್ರ , ಸಿದ್ಧ ಉಡುಪು ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮನೆಯಲ್ಲಿ ಸಂತೋಷದ ವಾತಾವರಣ.ನಿಯೋಜಿತ ಪ್ರಯಾಣ ಮುಂದೂಡಿಕೆ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.
೪.ಕರ್ಕಾಟಕ:
ಪಟ್ಟು ಹಿಡಿದು ಸಾಧನೆ ಮುಂದುವರಿಕೆ. ಉದ್ಯೋಗದಲ್ಲಿ ಉನ್ನತಿಯ ಸೂಚನೆ. ಅಕಸ್ಮಾತ್ ಧನಾಗಮ ಯೋಗ. ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಉತ್ತಮ ಲಾಭ. ಹಿರಿಯರ ಆರೋಗ್ಯ ಸುಧಾರಣೆ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೫.ಸಿಂಹ:
ಇಟ್ಟಿದ್ದ ತಪ್ಪು ಹೆಜ್ಜೆ ತಿದ್ದಿಕೊಂಡು ಲಾಭ. ಉದ್ಯೋಗ ಕ್ಷೇತ್ರದಲ್ಲಿ ಅಗ್ರ ಸ್ಥಾನ. ಉದ್ಯಮಕ್ಕೆ ಸರ್ವತೋಮುಖ ಪ್ರಗತಿ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ. ಗಣೇಶ ದ್ವಾದಶ ನಾಮ ಸ್ತೋತ್ತ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೬.ಕನ್ಯಾ:
ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ವೃತ್ತಿಪರಿಣತಿಯಿಂದ ಗೌರವ ಪ್ರಾಪ್ತಿ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಆಭರಣ ತಯಾರಿ ಕೆಲಸ ಬಲ್ಲವರಿಗೆ ಸದವಕಾಶ. ರಾತ್ರಿ ಪ್ರಯಾಣ ಹಿತಕರವಲ್ಲ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ,ಮಹಿಷಮರ್ದಿನಿ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೭. ತುಲಾ:
ಆಸಕ್ತಿಯ ವಿದ್ಯೆಯನ್ನು ಕಲಿಯಲು ಅನುಕೂಲ. ಉದ್ಯೋಗ ಸ್ಥಾನದಲ್ಲಿ ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಕುಟುಂಬದ ಹಿತೈಷಿ ಹಿರಿಯರ ಆಗಮನ. ಬಾಲ್ಯದ ಗುರುಗಳ ಭೇಟಿಯ ಅವಕಾಶ. ಸಂಸಾರದಲ್ಲಿ . ಎಲ್ಲರಿಗೂ ಉತ್ತಮ ಆರೋಗ್ಯ. ಗಣಪತಿ ಅಥರ್ವಶೀರ್ಷ, ಕನಕಧಾರಾ ಸ್ತೋತ್ರ,ದತ್ತಾತ್ರೇಯ ಸ್ತೋತ್ರ ಓದಿ
೮.ವೃಶ್ಚಿಕ:
ಉದ್ಯೋಗ ಸ್ಥಾನದಲ್ಲಿ ಹಿಂದಿನದೇ ಸ್ಥಿತಿ ಮುಂದುವರಿಕೆ. ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳು ಯಶಸ್ಸಿನ ಪಥದಲ್ಲಿ. ವಿದೇಶ ಯಾತ್ರೆಯ ಯೋಜನೆ ಮುಂದಕ್ಕೆ. ಗಸಂಕಷ್ಟನಾಶನ ಗಣೇಶ ಸ್ತೋತ್ರ, ವೇದಸಾರ ಶಿವಸ್ತೋತ್ರ, ದೇವೀಸ್ತೋತ್ತ ಓದಿ
೯.ಧನು:
ಪರಿಶ್ರಮವಿಲ್ಲದೆ ಬದುಕಿಲ್ಲ. ಹೊಸ ಕಾರ್ಯ ಮುಕ್ತಾಯಕ್ಕೆ ಎಲ್ಲರ ಸಂಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕಕ್ಕೆ ಸಮರ್ಥರ ನೇಮಕ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಖಾದ್ಯಪದಾರ್ಥ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಲಾಭ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೦.ಮಕರ:
ಸಮಯದ ಸದುಪಯೋಗಕ್ಕೆ ಸಿದ್ಧತೆ. ಉದ್ಯಮ ಉತ್ಪನ್ನಗಳ ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ. ಪ್ರಾಪ್ತ ವಯಸ್ಕ ಹುಡುಗರಿಗೆ ವಿವಾಹ ಯೋಗ. ಹಿತಶತ್ರುಗಳ ಮುಂದುವರಿದ ಸಂಚು. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
೧೧. ಕುಂಭ:.
ನಿಗದಿತ ಕಾರ್ಯಗಳು ಬಹುಪಾಲು ಮುಕ್ತಾಯ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣಸಾಮಗ್ರಿ, ಸ್ಟೇಶನರಿ ವಿತರಕರಿಗೆ ಹೊಸಬರ ಸಂಪರ್ಕ. ಸಮಾಜಸೇವಾ ಕಾರ್ಯಗಳ ನಾಯಕತ್ವ. ನಿವೃತ್ತರಿಗೆ ಮತ್ತೆ ಪ್ರವೃತ್ತರಾಗುವ ಉತ್ಸಾಹ. ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಶನಿ ಮಹಾತ್ಮೆ ಓದಿ.
೧೨. ಮೀನ:
ಬರುವ ಸಪ್ತಾಹದ ಒತ್ತಡಗಳಿಗೆ ಇಂದಿನಿಂದಲೇ ತಯಾರಿ.ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಬೇಡಿಕೆ. ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ ಸಾರ್ವಜನಿಕರಿಂದ ಪ್ರಶಂಸೆ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಗಣೇಶ ಕವಚ ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.