ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ:
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 1
1.ಮೇಷ:
ಉದ್ಯೋಗಸ್ಥರ ಅಪೇಕ್ಷೆಗಳು ಪೂರ್ಣಗೊಳ್ಳಲಿವೆ. ಉದ್ಯಮಿಗಳಿಂದ ಇನ್ನಷ್ಟು ಅವಕಾಶಗಳಿಗಾಗಿ ಶೋಧನೆ. ದೀರ್ಘಕಾಲದ ವ್ಯಾವಹಾರಿಕ ಸಮಸ್ಯೆಗೆ ಪರಿಹಾರ. ಶುಭ ಕಾರ್ಯಕ್ಕೊದಗಿದ ವಿಘ್ನ ನಿವಾರಣೆ. ಗೃಹಿಣಿಯರಿಗೆ, ಮಕ್ಕಳಿಗೆ ಆನಂದದ ದಿನ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
2.ವೃಷಭ:
ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ. ಉತ್ಪನ್ನಗಳ ಗುಣಮಟ್ಟದ ಸುಧಾರಣೆಗೆ ದೂರದೂರಿಗೆ ಗುರುಸಮಾನರ ಅಕಸ್ಮಾತ್ ಭೇಟಿ. ಸಂಗಾತಿಯ ಮನೋಗತವನ್ನು ಮನ್ನಿಸಿ ಪಾಲಿಸಿದರೆ ಸಂಸಾರದ ಭವಿಷ್ಯಕ್ಕೆ ಕ್ಷೇಮ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
3.ಮಿಥುನ:
ಉದ್ಯೋಗದಲ್ಲಿ ಪ್ರತಿಭೆ, ಹಿರಿತನಕ್ಕೆ ಗೌರವ. ದೇವತಾರಾಧನೆಯಿಂದ ಕಂಟಕ ನಿವಾರಣೆ. ಕುಟುಂಬದ ಹಿರಿಯರ ಸಂತೋಷಕೂಟ. ವಾಹನ ದುರಸ್ತಿ ಬಲ್ಲವರಿಗೆ ತ್ವರಿತ ಆದಾಯ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಪೂರ್ವ ದಿಕ್ಕಿನಿಂದ ಶುಭ ಸಮಾಚಾರ. ಗೃಹಿಣಿಯರಿಗೆ ಸಮಾಧಾನ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಗುರುಸ್ತೋತ್ರ ಓದಿ.
4.ಕರ್ಕಾಟಕ:
ಉದ್ಯೋಗದಲ್ಲಿ ತಾತ್ಕಾಲಿಕ ಅಡಚಣೆ. ವ್ಯವಹಾರ ಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸಿನಿಂದ ಸಮಾಜದಲ್ಲಿ ಗೌರವ. ದಾಂಪತ್ಯ ಜೀವನದಲ್ಲಿ ಸಂತೃಪ್ತಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟದ ಪಾಲೇ ದೊಡ್ಡದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ
ಅಷ್ಟಕ ಓದಿ.
5.ಸಿಂಹ:
ತತ್ಕ್ಷಣ ಸ್ಪಂದಿಸುವ ಗುಣದಿಂದ ಬಹುಜನಪ್ರೀತಿ. ಉದ್ಯಮದಲ್ಲಿ ಇನ್ನಷ್ಟು ಅವಕಾಶಗಳು ಗೋಚರ. ಅನಿರೀಕ್ಷಿತ ಧನಾಗಮ ಸಂಭವ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಂದ ಲಾಭ. ವಸ್ತ್ರ ,ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
6.ಕನ್ಯಾ:
ಸಕಾಲಿಕವಾಗಿ ಧನಾಗಮ. ಸಣ್ಣ ಉದ್ಯಮಕ್ಕೊದಗಿದ ವಿಘ್ನ ನಿವಾರಣೆ. ದೂರದಿಂದ ಶುಭವಾರ್ತೆ. ಲಘುಪಾನೀಯಾದಿ ದ್ರವಪದಾರ್ಥ ವ್ಯಾಪಾರಿಗಳಿಗೆ ಲಾಭ. ಹಿರಿಯರ ಮತ್ತು ಗೃಹಿಣಿಯರ ಆರೋಗ್ಯ ಗಮನಿಸಿ. ವರ- ವಧು ಅನ್ವೇಷಣೆಯಲ್ಲಿ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
7.ತುಲಾ:
ಮನಸ್ಸನ್ನು ಸ್ಥಿರಗೊಳಿಸುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಹೊಸ ಬಗೆಯ ಅವಕಾಶಗಳ ಸಾಧ್ಯತೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಆದಾಯ ವೃದ್ಧಿ. ದಾಂಪತ್ಯ ಜೀವನದಲ್ಲಿ ಸೌಖ್ಯ. ಗುರುಹಿರಿಯರ ಸಕಾಲಿಕ ಮಾರ್ಗದರ್ಶನ ಲಭ್ಯ. ಆರೋಗ್ಯ ಉತ್ತಮ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
8.ವೃಶ್ಚಿಕ:
ಸತ್ಪಾತ್ರರಿಗೆ ದಾನ ಮಾಡುವ ಅವಕಾಶ. ಉದ್ಯೋಗದಲ್ಲಿ ಪದೋನ್ನತಿ. ಉದ್ಯಮ ಕ್ಷೇತ್ರದಲ್ಲಿ ಜಯಭೇರಿ. ಹಿರಿಯರಿಗೆ ಉತ್ತಮ ದೇಹಾರೋಗ್ಯ. ವ್ಯವಹಾರದ ಸಂಬಂಧ ದಕ್ಷಿಣ ದಿಕ್ಕಿಗೆ ಪಯಣ ಸಂಭವ. ಗೃಹಿಣಿಯರಿಗೆ, ಮಕ್ಕಳಿಗೆ ಶುಭ. ಗಣೇಶ ಪಂಚರತ್ನ, ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
9. ಧನು:
ಅಂತರ್ವಾಣಿಯ ಮಾರ್ಗದರ್ಶನವನ್ನು ಅವಲಂಬಿಸಿರಿ. ವಸ್ತ್ರೋದ್ಯಮಿಗಳಿಗೆ ಮತ್ತು ಸ್ವರ್ಣೋದ್ಯಮಿಗಳಿಗೆ ಅಮಿತ ಲಾಭ. ಉದ್ಯೋಗಸ್ಥರಿಗೆ ಮಂದಗತಿಯಲ್ಲಿ ಮುನ್ನಡೆ. ನಿವೃತ್ತ ವೃತ್ತಿಪರರಿಗೆ ಹೊಸ ಅವಕಾಶ. ವಿವಾಹ ಮಾತುಕತೆ ಯಶಸ್ವಿ. ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಗುರುಸ್ತೋತ್ರ ಓದಿ.
10.ಮಕರ:
ಬುದ್ಧಿಯನ್ನು ಕೋಪದ ಕೈಗೆ ಕೊಡಬೇಡಿ. ಅಭಿಪ್ರಾಯ ವ್ಯಕ್ತಪಡಿಸಲು ಆತುರ ಬೇಡ. ದೈನಂದಿನ ವ್ಯವಹಾರದಲ್ಲಿ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ ಲಾಭ. ಧ್ಯಾನ, ದೇವತಾರ್ಚನೆಯಿಂದ ನೆಮ್ಮದಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಶುಭ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
11.ಕುಂಭ:
ಉದ್ಯೋಗಸ್ಥರಿಗೆ ಏಳಿಗೆಯ ಕಾಲ. ಮುದ್ರಣ ಸಾಮಗ್ರಿ, ಸ್ಟೇಶನರಿ,ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ಗೃಹಿಣಿಯರಿಗೆ ದ್ರವ್ಯಲಾಭ. ಉನ್ನತ ವ್ಯಾಸಂಗಾಸಕ್ತರಿಗೆ ಅನುಕೂಲದ ಸಮಯ. ಹಿರಿಯರಿಗೆ, ಮಕ್ಕಳಿಗೆ ಸಂತಸ. ಸಮಾಜ ಸೇವೆಯಲ್ಲಿ ಆಸಕ್ತಿ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ,ಶನಿಸ್ತೋತ್ರ ಓದಿ.
12.ಮೀನ:
ಉದ್ಯೋಗದ ಸಂಬಂಧ ದೂರದೂರಿಗೆ ಭೇಟಿ. ಇಲಾಖೆಗಳಿಂದ ಉತ್ತಮ ಸ್ಪಂದನ. ಹೊಸ ಕಾರ್ಯಾರಂಭಕ್ಕೆ ತಾತ್ಕಾಲಿಕ ವಿಘ್ನ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ. ಗ್ರಾಮೋದ್ಯೋಗಗಳಿಗೆ ಪ್ರೋತ್ಸಾಹ. ಹಿರಿಯರ, ಗೃಹಿಣಿಯರ,ಮಕ್ಕಳ ಆರೋಗ್ಯ ಸ್ಥಿರ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.